ಲಯನ್ಸ್ ನಿಂದ ಸ್ವಾಗತ ನಾಮಫಲಕ ಅನಾವರಣ

ದಾವಣಗೆರೆ,ನ.15-  ದಾವಣಗೆರೆ ಲಯನ್ಸ್ ಕ್ಲಬ್ ವತಿಯಿಂದ ನಗರದ ಪಿ.ಬಿ. ರಸ್ತೆಯ ಜಿಲ್ಲಾಧಿಕಾರಿಗಳ ಕಚೇರಿ ಬಳಿ ನಿರ್ಮಿಸಿರುವ ಸ್ವಾಗತ ನಾಮಫಲಕವನ್ನು ಜಿಲ್ಲಾ ಲಯನ್ಸ್ 317ಸಿ ರಾಜ್ಯಪಾಲ ಕೆ.ಸಿ.ವೀರಭದ್ರ ಅವರು ಅನಾವರಣಗೊಳಿಸಿದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಎಂ. ವಿಜಯ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಲಯನ್ಸ್ 317ಸಿ ಉಪ ರಾಜ್ಯಪಾಲ ವಿಶ್ವನಾಥ ಶೆಟ್ಟಿ, ಜಿಲ್ಲಾ ಲಯನ್ಸ್ ಮಾಜಿ ರಾಜ್ಯ ಪಾಲ ಡಾ. ಬಿ.ಎಸ್. ನಾಗಪ್ರಕಾಶ್, ಜಿಲ್ಲಾ ಲಯನ್ಸ್ 317ಸಿ ಛೇರ್ಮನ್
ಇ.ಎಂ. ಮಂಜುನಾಥ  ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ನಾಮಫಲಕದ ದಾನಿ, ಹಳ್ಳಿಕೇರಿ ಇಂಡಸ್ಟ್ರೀಸ್ ಮಾಲೀಕರೂ ಆಗಿರುವ ಲಯನ್ಸ್ ಕ್ಲಬ್ ಖಜಾಂಚಿ ಸಂಪತ್ ಬಿ.ಹಳ್ಳಿಕೇರಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಜಿಲ್ಲಾ ಲಯನ್ಸ್ ಕೋ-ಆರ್ಡಿನೇಟರ್ ಗಳಾದ ದಿನೇಶ್ ಕೆ.ಶೆಟ್ಟಿ, ಲಯನ್ಸ್ ಟ್ರಸ್ಟ್ ಕಾರ್ಯದರ್ಶಿ ಅಜ್ಜಂಪುರ ಶೆಟ್ರು ಮೃತ್ಯುಂಜಯ, ಲಯನ್ಸ್ ಕಾರ್ಯ ದರ್ಶಿ ಕೋರಿ ಶಿವಕುಮಾರ್, ನಿರ್ದೇಶಕರುಗಳಾದ ಎನ್.ಸಿ. ಬಸವರಾಜ್, ಪರಮೇಶ್ವರಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!