ಜಗಳೂರು : ವಿದ್ಯಾರ್ಥಿನಿ ಅಕಾಲಿಕ ಸಾವು ಪರಿಹಾರ ವಿತರಣೆ

ಜಗಳೂರು, ಅ. 15-ಅಕಾಲಿಕವಾಗಿ ಮೃತಪಟ್ಟ ವಿದ್ಯಾರ್ಥಿನಿ ಸಂಜ ನಾಳ ಪೋಷಕರಿಗೆ ಶಾಸಕ ಎಸ್.ವಿ. ರಾಮಚಂದ್ರ ಸರ್ಕಾರದ ಪರಿಹಾರದ ಚೆಕ್ ವಿತರಿಸಿದರು. ತಾಲ್ಲೂಕಿನ ಮೆದಗಿನಕೆರೆ ಸಮೀಪದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಸಂಜನಾ ಅವರು ತಮ್ಮ ಮನೆಯಲ್ಲಿ ಕಳೆದ ವರ್ಷ ಜೋಕಾಲಿ ಆಡುವಾಗ ಬಿದ್ದು ಮೃತಪಟ್ಟಿದ್ದರು.

ಸಂಜನಾಳ ಪೋಷಕರಾದ ಶಾಂತಮ್ಮ ಮೂರ್ತೆಪ್ಪ ದಂಪತಿಗಳಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಪರವಾಗಿ ಶಾಸಕರು 2.5 ಲಕ್ಷ ರೂ. ಮೊತ್ತದ ಪರಿಹಾರದ ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ಶಾಲಾ ಪ್ರಾಂಶುಪಾಲರಾದ ರೂಪಕಲಾ ಉಪಸ್ಥಿತರಿದ್ದರು.

error: Content is protected !!