ಜಾನಪದ ಸಂಗೀತ ಕಲಾವಿದ ಉಮೇಶ ನಾಯ್ಕ ಅವರಿಗೆೆ ಸನ್ಮಾನ

ದಾವಣಗೆರೆ, ನ.28- ಮಂಗಳೂರಿನ ಕಥಾ ಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆಯು ವಿವಿಧ ಕ್ಷೇತ್ರಗಳ ಸಾಧಕರಿಗೆ ಕೊಡಮಾಡುವ `ಕರಾವಳಿ ಕರ್ನಾಟಕ ಕಲಾ ರತ್ನ’ 2021 ಪ್ರಶಸ್ತಿಗೆ ದಾವಣಗೆರೆ ತಾಲ್ಲೂಕಿನ ಚಿನ್ನ ಸಮುದ್ರದ ಜಾನಪದ ಸಂಗೀತ ಕಲಾವಿದ ಉಮೇಶ ನಾಯ್ಕ ಭಾಜನರಾಗಿದ್ದಾರೆ.

ಮಂಗಳೂರಿನ ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆ ರವೀಂದ್ರ ಕಲಾ ಭವನದಲ್ಲಿ ಇಂದು ನಡೆದ ಸಾಂಸ್ಕೃತಿಕ ಕಲಾ ಉತ್ಸವದ ಸಂದರ್ಭದಲ್ಲಿ ಉಮೇಶ್ ನಾಯ್ಕ ಅವರಿಗೆ ಸ್ಮರಣಿಕೆಯೊಂದಿಗೆ ಸನ್ಮಾನಿಸಿ, ಗೌರವಿಸುವುದರ ಮೂಲಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈಚೆಗೆ ಏರ್ಪಾಡಾಗಿದ್ದ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಬೇಕಿದ್ದ ಪುನೀತ್ ರಾಜಕುಮಾರ್ ಅವರು ಅಕಾಲಿಕ ಅಗಲಿಕೆಯಿಂದ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಪುನೀತ್ ರಾಜಕುಮಾರ್ ಅವರ ಜವಾಬ್ದಾರಿಯನ್ನು ಹೊತ್ತ ಅವರ ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಸಾಧಕರಿಗೆ ನೀಡುವ ಪ್ರಶಸ್ತಿ ಪತ್ರಕ್ಕೆ ಸಹಿ ಹಾಕಿ ಶುಭ ಹಾರೈಸಿದ್ದಾರೆ. ಹಾವೇರಿಯ ಪವರ್‌ಸ್ಟಾರ್ ಕನ್ನಡ ಕೋಗಿಲೆ ಮೆಲೋಡಿಸ್ ಮತ್ತು ಬೆಂಗಳೂರಿನ ಅಪ್ಪು ಯೂತ್ ಬ್ರಿಗೇಡ್ ಇವರ ಸಹಯೋಗದಿಂದ ಈ ಕಾರ್ಯಕ್ರಮ ಏರ್ಪಾಡಾಗಿತ್ತು.

error: Content is protected !!