ಇಸ್ಕಾನ್ ಕೇಂದ್ರದಲ್ಲಿ ಕಾರ್ತಿಕ ಮಹೋತ್ಸವ

ದಾವಣಗೆರೆ, ನ. 14- ನಗರದ ಇಸ್ಕಾನ್ ದೇವಸ್ಥಾನ ಸಭಾಂಗಣದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಶ್ರೀ ದಾಮೋದರ ಆರತಿ ಹಾಗು ಬಾಳೆ ದಿಂಡಿನ ಅಲಂಕಾರದೊಂದಿಗೆ ತುಪ್ಪದ ದೀಪಗಳನ್ನು ಹಚ್ಚುವುದರ ಮೂಲಕ ಕಾರ್ತಿಕ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಇಸ್ಕಾನ್ ಮುಖ್ಯಸ್ಥರಾದ ಅವಧೂತ ಚಂದ್ರಹಾಸ ಅವರು ಪೂಜಾ ಕಾರ್ಯಗಳನ್ನು ನಡೆಸಿಕೊಟ್ಟರು. ನಂತರ ಅವರು ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡುತ್ತಾ,  ನಾವೆಲ್ಲಾ  ಜ್ಞಾನದ ದೀವಟಿಗೆಯಿಂದ ನಮ್ಮ ಜೀವನವನ್ನು ಬೆಳಗಿಸಿಕೊಳ್ಳಬೇಕೆಂದು ಹೇಳಿದರು.  ಯಾರು ಶ್ರೀಕೃಷ್ಣನನ್ನು ಅನನ್ಯವಾಗಿ ಪ್ರೀತಿಯಿಂದ ಭಜಿಸುತ್ತಾರೋ ಅಂತಹ ಭಕ್ತರ ಹೃದಯದಲ್ಲಿ ಶ್ರೀ ಕೃಷ್ಣನು ಪ್ರಕಾಶಮಾನವಾದ ಜ್ಞಾನ ದೀಪವನ್ನು ಬೆಳಗಿಸಿ, ಅಂಧಕಾರ ಹೋಗಲಾಡಿಸುತ್ತಾನೆ ಎಂದು ಭಗವದ್ಗೀತೆಯಲ್ಲಿಯೇ ಹೇಳಲಾಗಿದೆ ಎಂದು ವಿವರಿಸಿದರು.

error: Content is protected !!