ಲಿಂ. ವಿಶ್ವೇಶ್ವರ ಹಾಲಸ್ವಾಮೀಜಿಗಳು ಭಕ್ತರ ಮನದಲ್ಲಿ ನೆಲೆ ನಿಂತಿದ್ದಾರೆ

ಹೊನ್ನಾಳಿ ಕಾರ್ಯಕ್ರಮದಲ್ಲಿ ಹೊಟ್ಯಾಪುರ ಹಿರೇಮಠದ ಶ್ರೀ ಗಿರಿಸಿದ್ದೇಶ್ವರ ಸ್ವಾಮೀಜಿ

ಹೊನ್ನಾಳಿ, ಆ.5- ರಾಂಪುರ ಕ್ಷೇತ್ರದ ಲಿಂಗೈಕ್ಯ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿಯವರು ತಮ್ಮ ಜೀವಿತಾವಧಿಯಲ್ಲಿ ಅನೇಕ  ಜನಪರ ಕಲ್ಯಾಣ ಕಾರ್ಯಕ್ರಮಗಳನ್ನು ಮಾಡಿ ಭಕ್ತರ ಮನದಲ್ಲಿ ಶಾಶ್ವತವಾಗಿ ನೆಲೆ ನಿಂತಿದ್ದಾರೆ ಎಂದು ಹೊಟ್ಯಾಪುರ ಹಿರೇಮಠದ ಶ್ರೀ ಗಿರಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ರಾಂಪುರ ಕ್ಷೇತ್ರದ ಲಿಂಗೈಕ್ಯ ವಿಶ್ವೇಶ್ವರ ಹಾಲಸ್ವಾಮೀಜಿಯವರ 1ನೇ ವರ್ಷದ ಪುಣ್ಯಸ್ಮರಣೆ ಪೂಜಾ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.

ಯಾವುದೇ ಸಮಸ್ಯೆಗಳನ್ನು ಹೊತ್ತು ಮಠಕ್ಕೆ ಬರುತ್ತಿದ್ದ ಭಕ್ತರಿಗೆ ತಮ್ಮ ಮಾತುಗಳಿಂದ ಸಮಸ್ಯೆಯನ್ನು ಪರಿಹರಿಸಿ, ಸೂಕ್ತ ಚಿಕಿತ್ಸೆ ನೀಡುವ ವಿಶೇಷ ಗುಣ ಹೊಂದಿದ್ದ ಶ್ರೀಗಳು ಕರುಣಾಮೂರ್ತಿಯಾಗಿ ಭಕ್ತರ ಮನದಲ್ಲಿದ್ದಾರೆ.

ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ವಿಶ್ವೇಶ್ವರ ಹಾಲ ಸ್ವಾಮೀಜಿಯವರು ಬಡವ-ಶ್ರೀಮಂತ ಎಂಬ ಭೇದ ಭಾವವಿಲ್ಲದೆ ಎಲ್ಲರನ್ನೂ ಒಂದೇ ದೃಷ್ಟಿಯಲ್ಲಿ ಕಾಣುತ್ತಿದ್ದರು. ಶ್ರೀಗಳು ಇಂದು ನಮ್ಮ ಜೊತೆಯಲ್ಲಿ ಭೌತಿಕವಾಗಿ ಇಲ್ಲದಿದ್ದರೂ ಅವರು ಪ್ರತಿಯೊಬ್ಬರ ಮನಸ್ಸಿನಲ್ಲಿದ್ದಾರೆ ಎಂದರು. 

ಕಾರ್ಯಕ್ರಮದಲ್ಲಿ ಮೆಡಿಕಲ್ಸ್ ಶಿವಾನಂದಸ್ವಾಮಿ, ನ್ಯಾಮತಿ ಜಗದೀಶ್‌ ಆಚಾರ್ , ನೆಲಹೊನ್ನೆ ಮಂಜುನಾಥ, ಎಂ.ಎಸ್. ಶಾಸ್ತ್ರಿ ಹೊಳೆಮಠ್, ದೇವರಾಜ್, ಚನ್ನಪ್ಪಸ್ವಾಮಿ ಹೊಳೆಮಠ್, ತಿಪ್ಪೇಶ್ ಹೊಸಹಳ್ಳಿ, ಶ್ರೀನಿವಾಸ್‌, ಶಾಂತರಾಜ್ ಪಾಟೀಲ್ , ಬಿ. ಸಿದ್ದಪ್ಪ, ಎಚ್.ಎ. ಉಮಾಪತಿ, ಹರಳಹಳ್ಳಿ ಮಲ್ಲೇಶ್,  ಉಮಾ ಓಂಕಾರ್‌, ಪದ್ಮಾ ಇನ್ನಿತರರಿದ್ದರು.

error: Content is protected !!