ಶಾಸಕ ಕರುಣಾಕರ ರೆಡ್ಡಿ ಕ್ಷೇತ್ರ ನಿರ್ಲಕ್ಷಿಸಿದ್ದಾರೆ

ಹರಪನಹಳ್ಳಿ, ಆ.4- ಶಾಸಕ ಜಿ. ಕರುಣಾಕರ ರೆಡ್ಡಿ ಅವರು  ಇಲ್ಲಿ ಯವರೆಗೂ ಪ್ರವಾಹ ಪೀಡಿತ ಪ್ರದೇ ಶಗಳಿಗೆ   ಭೇಟಿ ನೀಡದೆ, ಸಂಕಷ್ಟದ ಲ್ಲಿರುವ ಜನರ ಸಮಸ್ಯೆ ಆಲಿಸದೇ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಜಿಲ್ಲಾ ಟಾಸ್ಕ್‌ಫೋರ್ಸ್‌ ಸಮಿತಿ ಸದಸ್ಯ ಶಶಿಧರ್ ಪೂಜಾರ್ ಆಕ್ರೋಶ ವ್ಯಕ್ತಪಡಿಸಿದರು. 

ಪಟ್ಟಣದ ತಮ್ಮ ನಿವಾಸದಲ್ಲಿ ಕಾಂಗ್ರೆಸ್ ಮುಖಂಡರು, ಅಭಿಮಾನಿಗಳ ಜೊತೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಟಿಎಪಿಎಂಎಸ್ ನಿರ್ದೇಶಕ ಗಿಡ್ಡಳ್ಳಿ ನಾಗರಾಜ್, ಯುವ ಕಾಂಗ್ರೆಸ್ ಉಪಾಧ್ಯಕ್ಷ ಟಿ. ಪ್ರವೀಣ್ ಕುಮಾರ್, ಯುವ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಸಂಚಾಲಕ ಆರ್.ಮಾಂತೇಶ್ ನಾಯ್ಕ, ಎನ್‌ಎಸ್‌ಯುಐ ಅಧ್ಯಕ್ಷ ಶ್ರೀಕಾಂತ್ ಯಾದವ್, ಮುಖಂಡರಾದ ಎಂ.ಕೆ. ರಾಯಲ್‌ ಸಿದ್ಧಿಕ್, ರಿಯಾಜ್ ಅಹ್ಮದ್, ಬಸವರಾಜ್ ಭಂಡಾರಿ, ಯರಿಸ್ವಾಮಿ, ಪೈಲ್ವಾನ್ ಅಬ್ದುಲ್ ರೆಹಮಾನ್, ಸೋಗಿ ಇಬ್ರಾಹಿಂ, ನೂರುದ್ದೀನ್, ಸಮೀಉಲ್ಲಾ, ಶಾಕಿರ್ ಅಲಿ, ಬಿ.ಎಲ್. ಬೀರೇಶ್, ಶಂಷುದ್ದೀನ್ ಕೋಲ್ಕರ್, ರಂಜಿತ್ ಪೂಜಾರ್, ಮನ್ಸೂರ್, ಮೋಹನ್ ಕುಮಾರ್, ವಿಜಯಕುಮಾರ್ ಶೃಂಗಾರತೋಟ, ಡಿ. ಮಂಜು,  ನಯಾಜ್, ಬಸವರಾಜ್‌, ಸಲೀಂ ಲಾಟಿ ಹುಸೇನ್ ಇನ್ನಿತರೆ ಕಾಂಗ್ರೆಸ್ ಯುವ ಮುಖಂಡರು ಪಾಲ್ಗೊಂಡಿದ್ದರು.

error: Content is protected !!