ಶಾಮನೂರು ಕುಟುಂಬದಿಂದ ಲಸಿಕೆ

ದಾವಣಗೆರೆ, ಜೂ.7- ಶಾಸಕ ಶಾಮನೂರು ಶಿವಶಂಕ ರಪ್ಪ ಮತ್ತು ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರುಗಳು ಹಮ್ಮಿಕೊಂಡಿರುವ ಉಚಿತ ಲಸಿಕಾ ಶಿಬಿರ ಕಾರ್ಯಕ್ರಮವು ಇಂದು ಸಹ ಮುಂದುವರೆದಿದ್ದು ನಾಗರಿಕರು ಉಚಿತ ಲಸಿಕೆ ಪಡೆದರು.

ನಗರ ಪಾಲಿಕೆಯ 1, 5, 20 ಮತ್ತು 45ನೇ ವಾರ್ಡುಗಳ ವ್ಯಾಪ್ತಿಯ ಡಾ. ಬಾಬು ಜಗಜೀವನರಾಂ ಸಮುದಾಯ ಭವನ, ಹೊರಟ್ಟಿ ದುರ್ಗಾಂಬಿಕಾ ಭವನ ಮತ್ತು ಭಾರತ್ ಕಾಲೋನಿಯ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಲಸಿಕೆ ನೀಡಲಾಯಿತು. 

ಸ್ವತಃ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ಲಸಿಕೆ ನೀಡುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಲಸಿಕೆ ಪಡೆದ ನಾಗರಿಕರ ಯೋಗಕ್ಷೇಮವನ್ನು ವಿಚಾರಿಸಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್   ಶೆಟ್ಟಿ, ಪಾಲಿಕೆ ಸದಸ್ಯರುಗಳಾದ ನಾಗರಾಜ್, ಜಿ.ಡಿ.ಪ್ರಕಾಶ್, ಉದಯ್ ಕುಮಾರ್, ಸುಧಾ ಇಟ್ಟಿಗುಡಿ ಮಂಜುನಾಥ್, ಮೀನಾಕ್ಷಿ ಜಗದೀಶ್, ವಿನಾಯಕ ಪೈಲ್ವಾನ್, ಮುಖಂಡರುಗಳಾದ ಎಸ್.ಮಲ್ಲಿಕಾರ್ಜುನ್, ಬಿ.ಎಂ.ಈಶ್ವರ್, ಟಿ.ರಮೇಶ್, ಬಿ.ಎಂ.ರಾಮಸ್ವಾಮಿ, ಪ್ರವೀಣ್, ರಾಕೇಶ್, ವೆಂಕಟೇಶ ನಾಯ್ಕ, ಸೊಸೈಟಿ ವೆಂಕಟೇಶ್ ನಾಯ್ಕ, ಅಲೆಕ್ಸಾಂಡರ್ (ಜಾನ್), ಅನ್ನಪೂರ್ಣಮ್ಮ, ಹರೀಶ್ ಕೆ.ಎಲ್ ಬಸಾಪುರ, ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

error: Content is protected !!