ವೀರಶೈವ ಮಹಾಸಭಾದ ರಾಜ್ಯ ಮಹಿಳಾ ಅಧ್ಯಕ್ಷೆ ಅರುಣದೇವಿ ಅವರಿಗೆ ನಗರದಲ್ಲಿ ಸನ್ಮಾನ

ದಾವಣಗೆರೆ, ನ.10-  ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹಿರಿಯ ಪುತ್ರಿಯೂ ಆಗಿರುವ ಅಖಿಲ ಭಾರತ ವೀರಶೈವ ಮಹಾಸಭಾದ ಮಹಿಳಾ ರಾಜ್ಯಾಧ್ಯಕ್ಷರಾದ ಶ್ರೀಮತಿ ಅರುಣದೇವಿ ಅವರು ಇಂದು ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿರುವ ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್ ಅವರು ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ವೀರಶೈವ ಮಹಾ ಸಭೆಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಶಿವನಗೌಡ ಟಿ.ಪಾಟೀಲ, ಜಿಲ್ಲಾ ಸಂಚಾಲಕ ಟಿಂಕರ್ ಮಂಜಣ್ಣ,    ನಗರ ಯುವಘಟಕದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್‌ ನೀಲಗುಂದ, ಉಪಾಧ್ಯಕ್ಷರುಗಳಾದ ಗುರು ಶಾಂತ್‌ ಸೋಗಿ, ಅಭಿಷೇಕ್ ಪಿ.ಎಳೆಹೊಳೆ, ಸದಸ್ಯರಾದ ಪ್ರಶಾಂತ್‌ ಅಣಜಿ, ಶಿವಾನಂದ, ಮುತ್ತಣ್ಣ, ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷರಾದ ಉಮಾ ಎಂ.ಪಿ.ರಮೇಶ್, ಮಹಿಳಾ ನಗರ ಘಟಕದ ಅಧ್ಯಕ್ಷರಾದ ಪುಷ್ಪ ವಾಲಿ, ಪ್ರಧಾನ ಕಾರ್ಯದರ್ಶಿಗಳಾದ ಶೋಭಾ ಕೊಟ್ರೇಶ್, ಮುಖಂಡರಾದ ಮಂಜುಳಾ ಮಹೇಶ್, ದ್ರಾಕ್ಷಾಯಣಿ, ಮಾಜಿ ಮೇಯರ್ ಅಶ್ವಿನಿ ಪ್ರಶಾಂತ್, ಶೋಭಾ ಪಲ್ಲಾಗಟ್ಟಿ, ಮಂಗಳಾ, ಹರಿಹರ ನಗರಸಭಾ ಸದಸ್ಯರಾದ ಅಶ್ವಿನಿ ಕೃಷ್ಣ, ಸುಮಂಗಲ, ಮಂಜುಳಾ, ಕವಿತಾ,  ಲಕ್ಷ್ಮಿ, ರೂಪ, ರೇಖಾ ಮತ್ತಿತರರು ಉಪಸ್ಥಿತರಿದ್ದರು.

error: Content is protected !!