ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಬಿಜೆಪಿ ಎಸ್ಸಿ ಮೋರ್ಚಾ ಪ್ರತಿಭಟನೆ

ಹರಪನಹಳ್ಳಿ, ನ.10- ದಲಿತರು ಹೊಟ್ಟೆ ಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ ಎಂದು  ಹೇಳಿಕೆ ನೀಡಿರುವ ವಿಪಕ್ಷ ನಾಯಕ ಸಿದ್ಧರಾಮಯ್ಯನವರ  ವಿರುದ್ಧ ಪಟ್ಟಣದಲ್ಲಿ ಬಿಜೆಪಿ ಎಸ್ಸಿ ಮೋರ್ಚಾದಿಂದ ಪ್ರತಿಭಟನೆ ನಡೆಸಿ, ಅವರ ಪ್ರತಿಕೃತಿ ದಹನ ಮಾಡಲಾಯಿತು.

ಸ್ಥಳೀಯ ಬಿಜೆಪಿ ಕಾರ್ಯಾಲಯದಿಂದ ಮೆರವಣಿ ಗೆ ಮೂಲಕ ಪ್ರವಾಸಿ ಮಂದಿರ ವೃತ್ತಕ್ಕೆ ಆಗಮಿಸಿದ ಕಾರ್ಯಕರ್ತರು, ಬಹಿರಂಗ ಸಭೆ ನಡೆಸಿ, ಸಿದ್ದರಾ ಮಯ್ಯನವರ ಹೇಳಿಕೆಗೆ  ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ  ತಾಲ್ಲೂಕು ಅಧ್ಯಕ್ಷ ಸತ್ತೂರು ಹಾಲೇಶ್‌, ಉಪಾಧ್ಯಕ್ಷ ನಿಟ್ಟೂರು ಸಣ್ಣಹಾಲಪ್ಪ, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಮಲ್ಲೇಶ್‌, ಜಿಲ್ಲಾ ಬಿಜೆಪಿ ಎಸ್.ಟಿ. ಮೋರ್ಚಾ ಕಾರ್ಯದರ್ಶಿ ಆರ್. ಲೋಕೇಶ್‌, ಪುರಸಭಾ ಸದಸ್ಯರುಗಳಾದ ಕಿರಣ್ ಶಾನಭಾಗ್‌, ವಿನಾಯಕ ಗೌಳಿ, ಎಂ.ಕೆ. ಜಾವೇದ್, ಮುಖಂಡರಾದ ವಿಶ್ವನಾಥ ಶಿರಗಾನಹಳ್ಳಿ, ಎಸ್.ಪಿ. ಲಿಂಬ್ಯಾನಾಯ್ಕ, ರಾಘವೇಂದ್ರಶೆಟ್ಟಿ, ಕಡತಿ ರಮೇಶ್‌, ದಾದಾಪುರ ಶಿವಾನಂದ, ಲಿಂಗರಾಜ, ಜೋಗಿ ಬಸವರಾಜ, ಗೌರಿಹಳ್ಳಿ ರಮೇಶ, ಸಿ.ಸಿ. ರಾಮಚಂದ್ರನಾಯ್ಕ, ಈಡಿಗರ ಅಂಜಿನಪ್ಪ, ಕಣಿವಿಹಳ್ಳಿ ಮಾರುತಿ, ಪೂರ್ಯಾನಾಯ್ಕ ಇನ್ನಿತರರು ಪಾಲ್ಗೊಂಡಿದ್ದರು.

error: Content is protected !!