ಆಮ್ಲಜನಕ ಸಿಲಿಂಡರ್‌ಗಳು ಉರುಳಿ ತಹಶೀಲ್ದಾರ್‌ ಕಾಲಿಗೆ ಪೆಟ್ಟು

ಹರಿಹರ, ಮೇ 20- ನಗರದ ಸದರ್ನ್ ಗ್ಯಾಸ್  ಘಟಕದಲ್ಲಿ ಜೋಡಿಸಿಟ್ಟಿದ್ದ ಖಾಲಿ ಸಿಲಿಂಡರ್‌ಗಳು ಉರುಳಿ ಬಿದ್ದ ಕಾರಣ ಸ್ಥಳದಲ್ಲಿದ್ದ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಮೀನುಗಾರಿಕೆ ಇಲಾಖೆಯ ನಿರ್ದೇಶಕರು ಸೇರಿದಂತೆ ಕೆಲವರ ಕಾಲಿಗೆ ಪೆಟ್ಟಾಗಿದೆ.

 ಖಾಲಿ ಸಿಲಿಂಡರ್‌ಗಳು ನೆಲಕ್ಕೆ ಉರುಳುವ ಸಮಯದಲ್ಲಿ ತಹಶೀಲ್ದಾರ್  ರಾಮಚಂದ್ರಪ್ಪ ಇತರರು ಗೋಡೌನ್‌ನಲ್ಲಿ ಆಮ್ಲಜನಕದ ಸಿಲಿಂಡರ್ ಗಳನ್ನು ಪರಿಶೀಲನೆ ಮಾಡುತ್ತಿದ್ದರು. ಒಂದು ಖಾಲಿ ಸಿಲಿಂಡರ್ ಇನ್ನೊಂದು ಸಿಲಿಂಡರ್‌ಗೆ ತಗುಲಿದ ಪರಿಣಾಮ ಗೋಡಾನ್‌ನಲ್ಲಿ ನೂರಾರು ಸಿಲಿಂಡರ್‌ಗಳು ಚೆಲ್ಲಾಪಿಲ್ಲಿಯಾಗಿ ನೆಲಕ್ಕೆ ಉರುಳಿದ ಸಂದರ್ಭದಲ್ಲಿ ಈ ಅವಘಡ ನಡೆದಿದೆ.  

ಸಿಲಿಂಡರ್‌ಗಳು ನೆಲಕ್ಕೆ ಉರುಳಿ ಬೀಳುತ್ತಿದ್ದಂತೆ ದೊಡ್ಡ ಪ್ರಮಾಣದಲ್ಲಿ ಶಬ್ಧವಾಗಿದ್ದು, ಅಕ್ಕಪಕ್ಕದ ಕೈಗಾರಿಕಾ ಕೇಂದ್ರದಲ್ಲಿ ಇರುವವರು ಸಿಲಿಂಡರ್ ಸ್ಫೋಟಗೊಂಡಿದೆ ಎಂದು ತಿಳಿದಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.  ಅದೃಷ್ಟಾವಶತ್ ಸಿಲಿಂಡರ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದರೂ ಯಾವುದೇ ಸಿಲಿಂಡರ್‌ಗಳು ಸ್ಫೋಟವಾಗಿಲ್ಲ. ಹಾಗಾಗಿ ಅನಾಹುತ ತಪ್ಪಿದಂತಾಗಿದೆ. 

error: Content is protected !!