ಜಾಗತಿಕ ಲಿಂಗಾಯತ ಮಹಾಸಭಾದಿಂದ ಬಸವ ಜಯಂತಿ

ದಾವಣಗೆರೆ, ಮೇ 17- ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಜಗಜ್ಯೋತಿ ಬಸವೇಶ್ವರರ 888 ನೇ ಜಯಂತ್ಯೋತ್ಸವವನ್ನು ವಚನ ಗಾಯನದೊಂದಿಗೆ ಸಭಾದ ಕಚೇರಿಯಲ್ಲಿ ಆಚರಿಸಲಾಯಿತು. ಪುಷ್ಪಾರ್ಚನೆ ಮಾಡಿದ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಶಿವಕುಮಾರ್ ಅವರು  ಮಾತನಾಡಿ, ಸಮಾಜದ ಅಂಕುಡೊಂಕುಗಳನ್ನು ತಿದ್ದಿ, ತೀಡಿ, ಮೂಢ ನಂಬಿಕೆಗಳ ವಿರುದ್ಧ ಸಮರ ಸಾರಿ, ಸಾಮಾಜಿಕ ಕ್ರಾಂತಿಯ ಹರಿಕಾರರಾಗಿ ಅರಿವೇ ಗುರು ಮತ್ತು ಕಾಯಕವೇ ಕೈಲಾಸ ಎಂಬ ಘೋಷಣೆಯೊಂದಿಗೆ ಆರಾಧ್ಯ ದೈವವಾಗಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕಿ, ಮೌಢ್ಯಗಳನ್ನು ಧಿಕ್ಕರಿಸಿ ಜಗದ ಗುರುವಾದರು ಎಂದರು.

ಮಹಾಸಭಾದ ರಾಜ್ಯ ಕಾರ್ಯದರ್ಶಿ ಅಗಡಿ ಮಹಾಂತೇಶ್, ಸಂಚಾಲಕ ಶಶಿಧರ್ ಉಪಸ್ಥಿತರಿದ್ದರು. ಅರುಣ್‌ಕುಮಾರ್ ವಚನ ಗಾಯನ ನಡೆಸಿಕೊಟ್ಟರು. ಮುಖ್ಯ ಅತಿಥಿಗಳಾಗಿ ಪ್ರಭು ಕಲಬುರ್ಗಿ, ಮರುಳ ಸಿದ್ಧಯ್ಯ, ಶ್ರೀನಿವಾಸ್ ಭಾಗವಹಿಸಿದ್ದರು.

error: Content is protected !!