ವೀರಶೈವ ಮಹಾಸಭಾದಿಂದ ವ್ಯಾಕ್ಸಿನ್ ಪಡೆಯುವವರಿಗೆ ಬೆಳಗಿನ ಉಪಹಾರ

ದಾವಣಗೆರೆ, ಮೇ 17- ವೀರಶೈವ ಮಹಾಸಭಾದಿಂದ ಸಿ.ಜಿ. ಆಸ್ಪತ್ರೆ ಬಳಿ ವ್ಯಾಕ್ಸಿನ್ ತೆಗೆದುಕೊಳ್ಳುವವರಿಗೆ ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರಿಗೆ ಬೆಳಗಿನ ಉಪಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಹಾಸಭಾದ ಜಿಲ್ಲಾಧ್ಯಕ್ಷ ದೇವರಮನಿ ಶಿವಕುಮಾರ್, ಪಾಲಿಕೆ ಸದಸ್ಯರಾದ ಶಿವನಗೌಡ ಟಿ. ಪಾಟೀಲ್, ಎಂ.ವಿ. ಜಯಪ್ರಕಾಶ್, ಟಿಂಕರ್ ಮಂಜಣ್ಣ, ಶಿವಾನಂದ ಬೆನ್ನೂರು, ಅಭಿಷೇಕ್ ಪಿ. ಎಳೆಹೊಳೆ, ಶ್ರೀಕಾಂತ ನೀಲಗುಂದ, ಪ್ರಶಾಂತ್ ಅಣಜಿ ಶೆಟ್ರು, ಎಳನೀರು ಮುತ್ತಣ್ಣ, ಕೆ.ಆರ್. ಯೋಗೀಶ್, ರಾಜು ಹೋಟೆಲ್, ವಿನಾಯಕ ಸೇರಿದಂತೆ ಇತರರು ಇದ್ದರು.

error: Content is protected !!