ಎಸ್‌ಎಸ್‌, ಎಸ್ಸೆಸ್ಸೆಂ ಅಭಿಮಾನಿ ಬಳಗದಿಂದ ನಿರಾಶ್ರಿತರಿಗೆ ಉಪಹಾರ

ದಾವಣಗೆರೆ, ಮೇ 16- ಡಾ. ಶಾಮನೂರು ಶಿವಶಂಕರಪ್ಪ ಹಾಗೂ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅಭಿಮಾನಿ ಬಳಗದಿಂದ ನಗರದ ಮಹಿಳಾ  ಮತ್ತು ಮಕ್ಕಳ ಆಸ್ಪತ್ರೆ ಸುತ್ತಮುತ್ತಲೂ ಸಂಕಷ್ಟದಲ್ಲಿರುವವರಿಗೆ ಮತ್ತು ನಿರಾಶ್ರಿತರಿಗೆ ಮಾಸ್ಕ್‌, ಉಪಹಾರ ಹಾಗೂ ನೀರಿನ ಬಾಟಲ್‌ಗಳನ್ನು ವಿತರಿಸಲಾಯಿತು. ಪಾಲಿಕೆ ಸದಸ್ಯ ಜಿ.ಎಸ್‌. ಮಂಜುನಾಥ ಗಡಿಗುಡಾಳ್‌ ಅವರು ಕೊರೊನಾ ಬಗ್ಗೆ ಮುಂಜಾಗ್ರತೆ ವಹಿಸುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು. ಹಿರಿಯ ಮುಖಂಡರುಗಳಾದ ಡಿ. ಬಸವರಾಜ್‌, ಪಾಲಿಕೆ ಸದಸ್ಯರುಗಳಾದ ಚಮನ್‌ ಸಾಬ್‌, ರಹೀಂ ಸಾಬ್‌, ಪಾಮೇನಹಳ್ಳಿ ನಾಗರಾಜ್, ವಿನಾಯಕ ಪೈಲ್ವಾನ್‌, ಗಣ್ಯರಾದ ಹುಲ್ಮನಿ ಗಣೇಶ್‌, ಆಶಾ ಉಮೇಶ್‌ ಇಟ್ಟಿಗುಡಿ ಮಂಜುನಾಥ್‌, ಮೀನಾಕ್ಷಿ ಜಗದೀಶ್‌ ಮುಂತಾದವರು ಭಾಗವಹಿಸಿದ್ದರು

error: Content is protected !!