ಅಭಾವೀಮದಿಂದ ಅಲೆಮಾರಿ ಜನಾಂಗಕ್ಕೆ ಆಹಾರ ಕಿಟ್ ವಿತರಣೆ

ದಾವಣಗೆರೆ, ಮೇ 16- ಅಖಿಲ ಭಾರತ ವೀರಶೈವ ಮಹಾಸಭಾದ ವತಿಯಿಂದ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಆಚರಿಸಲಾಯಿತು. 

ಮಹಾಸಭಾದ ಜಿಲ್ಲಾಧ್ಯಕ್ಷ ದೇವರಮನಿ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಗರದ ಪಿ.ಬಿ. ರಸ್ತೆಯಲ್ಲಿರುವ ನಿರಾಶ್ರಿತ ಹಕ್ಕಿಪಿಕ್ಕಿ ಅಲೆಮಾರಿ ಜನಾಂಗದವರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪಾಲಿಕೆಯ ಸದಸ್ಯರಾದ ಶಿವನಗೌಡ ಟಿ. ಪಾಟೀಲ್, ಜಯಪ್ರಕಾಶ್ ಮಾಗಿ, ಟಿಂಕರ್ ಮಂಜಣ್ಣ, ಶಿವಾನಂದ ಬೆನ್ನೂರ್, ಶ್ರೀಕಾಂತ ನೀಲಗುಂದ, ಅಭಿಷೇಕ ಪಿ. ಎಳೆಹೊಳೆ ಇದ್ದರು.

error: Content is protected !!