ರಾಣೇಬೆನ್ನೂರಿನಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ದಿನಸಿ ಕೊಡುಗೆ

ರಾಣೇಬೆನ್ನೂರು, ಜು.21-  ಬಡವರ ಬದುಕನ್ನು ಬರಡು ಮಾಡಿದ ಕೊರೊನಾ ಕಣ್ಣೀರು ತರಿಸುತ್ತಿದ್ದು, ದೇವರು ಕೊಟ್ಟಿರುವು ದರಲ್ಲಿಯೇ ಸ್ವಲ್ಪವನ್ನು  ಇಲ್ಲದವರಿಗೆ ಕೊಟ್ಟರೆ ಅವರೂ ಬಕ್ರೀದ್ ಹಬ್ಬವನ್ನು ಸಂತೋಷದಿಂದ ಆಚರಿಸುತ್ತಾರೆ ಎಂದು ಹೇಳಿದ ನಗರಸಭೆ ಗುತ್ತಿಗೆದಾರ ಮುಸ್ತಫಾ ದರವಾನ ಅವರು ಬಡವರಿಗೆ, ಅಂಗವಿಕಲರಿಗೆ ದಿನಸಿ ಕಿಟ್‌ಗಳನ್ನು ವಿತರಿಸಿದರು.

ದೌಲತ್ ಬಜಾರ್ ಬಳಿಯ ಇಸ್ಲಾಂಪುರ ಓಣಿಯಲ್ಲಿ ನಿನ್ನೆ ಬೆಳಿಗ್ಗೆ ನಗರಸಭೆ ಮಾಜಿ ಸದಸ್ಯ ಜಮ್ಮಣ್ಣಿ ಅತ್ತಾರ, ಸನಾಉಲ್ಲಾ ಮುಲ್ಲಾ, ರಾಜು  ಹರಪನಹಳ್ಳಿ, ದಸ್ತಗೀರ್‌ಸಾಬ್, ಅಬ್ದುಲ್ ಖಯಾಮುಲ್ ಶಿಕಾರಿಪುರ,
ಆರ್. ಬಿ. ಬಾದಷಹ್ ಇನ್ನಿತರರಿದ್ದರು.

error: Content is protected !!