ವಿವಿಧೆಡೆ ರಾಮನವಮಿ ಆಚರಣೆ

ವಿವಿಧೆಡೆ ರಾಮನವಮಿ ಆಚರಣೆ - Janathavani

ಮಲೇಬೆನ್ನೂರು, ಏ.23- ರಾಮನವಮಿ ಅಂಗವಾಗಿ ಮಲೇಬೆನ್ನೂರು ಹೋಬಳಿಯ ವಿವಿಧ ಕ್ಯಾಂಪ್‌ಗಳಲ್ಲಿರುವ ಶ್ರೀ ರಾಮ ಮಂದಿರಗಳಲ್ಲಿ ಸೀತಾರಾಮ ಕಲ್ಯಾಣೋತ್ಸವ ನಡೆಸಲಾಯಿತು.

ವಿನಾಯಕ ನಗರ ಕ್ಯಾಂಪ್ (ಜಿಗಳಿ ಕ್ಯಾಂಪ್) ನಲ್ಲಿರುವ ಶ್ರೀರಾಮ ಮಂದಿರದಲ್ಲಿ ವಿಶೇಷ ಪೂಜೆ, ಅಭಿಷೇಕ ಮತ್ತು ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಪಾನಕ, ಕೋಸಂಬರಿ ವಿತರಿಸಲಾಯಿತು. ವೇಮನ ಗುರುಪೀಠದ ಶ್ರೀ ವೇಮನಾನಂದ ಸ್ವಾಮೀಜಿ, ಜಿ.ಪಂ. ಮಾಜಿ ಸದಸ್ಯ ಎಂ. ನಾಗೇಂದ್ರಪ್ಪ, ಮಾಜಿ ಶಾಸಕ ಬಿ.ಪಿ. ಹರೀಶ್, ಪುತ್ರ ಅರ್ಜುನ್, ಡಿಸಿಸಿ ಬ್ಯಾಂಕ್‌ ಮಾಜಿ ಉಪಾಧ್ಯಕ್ಷ ಜಿ. ಆನಂದಪ್ಪ,  ಜಿಗಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ.ಎಂ. ದೇವೇಂದ್ರಪ್ಪ, ಜಿ.ಎಂ. ಆನಂದಪ್ಪ, ಭಾಸ್ಕರ್‌ರಾವ್ ಕ್ಯಾಂಪಿನ ಮಾಜಿ ಪ್ರಧಾನರಾದ ಸತ್ಯನಾ ರಾಯಣ, ಕುಂಬಳೂರು ಗ್ರಾ.ಪಂ. ಸದಸ್ಯ ಶ್ರೀನಿವಾಸ್, ಮಾಜಿ ಅಧ್ಯಕ್ಷ ಮೇಕಾ ನಾಗೇಶ್ವರರಾವ್, ಸುಮಿತ್ರಮ್ಮ ಕರಿಬಸಪ್ಪ, ಮಾಜಿ ಸದಸ್ಯ ಎನ್. ಪ್ರಸಾದ್ ರಾವ್, ದೇವಸ್ಥಾನ ಸಮಿತಿ ಅಧ್ಯಕ್ಷ ಸಿ.ಹೆಚ್. ಪ್ರಸಾದ್ ಹಾಗೂ ಕ್ಯಾಂಪ್ ಗ್ರಾಮಸ್ಥರು ಭಾಗವಹಿಸಿದ್ದರು.

ಸತ್ಯನಾರಾಯಣ ರಾವ್ ಕ್ಯಾಂಪ್, ಭಾಸ್ಕರ್‌ರಾವ್ ಕ್ಯಾಂಪ್, ನಂದಿಗುಡಿ ಕ್ಯಾಂಪ್, ಹಳ್ಳಿಹಾಳ್ ಕ್ಯಾಂಪ್‌ನಲ್ಲೂ ರಾಮನವಮಿ ಹಮ್ಮಿಕೊಳ್ಳಲಾಗಿತ್ತು. ನೆಹರು ಕ್ಯಾಂಪ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗ ವಾಡಿ ವೀರೇಶ್, ತಾ.ಪಂ. ಅಧ್ಯಕ್ಷ ಆದಾಪುರ ವೀರ ಭದ್ರಪ್ಪ, ಸಾಲಕಟ್ಟಿ ಸಿದ್ದಪ್ಪ ಇನ್ನಿತರರು ಪಾಲ್ಗೊಂಡಿದ್ದರು.

error: Content is protected !!