ನಾರಾಯಣ ಸ್ವಾಮಿಗೆ ಕೇಂದ್ರ ಸಚಿವ ಸ್ಥಾನ : ಜಗಳೂರಿನಲ್ಲಿ ಸ್ವಾಗತಾರ್ಹ

ಜಗಳೂರು, ಜು.9- ಮಾದಿಗ ಸಮು ದಾಯದ ರಾಜ್ಯಮಟ್ಟದ ಧೀಮಂತ ಹೋ ರಾಟಗಾರರು,  ಶೋಷಿತ ವರ್ಗದ ಧ್ವನಿಯಾ ಗಿರುವ  ನಾರಾಯಣ ಸ್ವಾಮಿ ಅವರಿಗೆ ಕೇಂದ್ರ ಸಚಿವ ಸ್ಥಾನ ದೊರೆತಿರುವುದು ಸ್ವಾಗತಾರ್ಹ ಎಂದು ಮಾದಿಗ ಸಮಾಜದ ಮುಖಂಡ ಓಬಣ್ಣ ತಿಳಿಸಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ನಾರಾ ಯಣ ಸ್ವಾಮಿ ಅಭಿಮಾನಿ ಬಳಗ ಹಾಗೂ  ಮಾದಿಗ ಸಮುದಾಯ ವತಿಯಿಂದ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕುಬೇರಪ್ಪ ಗೌರಿಪುರ ಮಾತನಾಡಿ, ಪಕ್ಷ ನಿಷ್ಠೆ, ದೇಶ ಭಕ್ತಿ ಮೆಚ್ಚಿ ಕೇಂದ್ರ ಸರ್ಕಾರದ ಸಚಿವರಾಗಿ ಸ್ಥಾನಮಾನ ಕಲ್ಪಿಸಿರುವುದು ಶೋಷಿತ ವರ್ಗಕ್ಕೆ ದೊರೆತ ನ್ಯಾಯವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾದಿಗ ಸಮಾಜದ ಮುಖಂಡರಾದ  ಪೂಜಾರ್ ಸಿದ್ದಪ್ಪ, ನಾಗಲಿಂಗಪ್ಪ, ಕುಮಾರ್, ಕೇಶವಮೂರ್ತಿ, ಗುತ್ತಿಗೆದಾರ ತಿಪ್ಪೇಸ್ವಾಮಿ, ಪಲ್ಲಾಗಟ್ಟೆ ಮಂಜಣ್ಣ ಇನ್ನಿತರರಿದ್ದರು.

error: Content is protected !!