ಮಲೇಬೆನ್ನೂರು : ಪುರಸಭೆ, ನಾಡ ಕಛೇರಿ ಅಧಿಕಾರಿ, ಸಿಬ್ಬಂದಿಗಳಿಗೆ ಕೋವಿಡ್‌ ಲಸಿಕೆ

ಮಲೇಬೆನ್ನೂರು, ಫೆ. 10 – ಇಲ್ಲಿನ ಪುರಸಭೆಯ ಮತ್ತು ನಾಡ ಕಛೇರಿಯ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಮಂಗಳವಾರ ಮತ್ತು ಬುಧವಾರ 2ನೇ ಹಂತದಲ್ಲಿ ಕೋವಿಡ್‌ ಲಸಿಕೆ ನೀಡಲಾಯಿತು.

ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ್, ಉಪ ತಹಶೀಲ್ದಾರ್ ಆರ್. ರವಿ, ಕಂದಾಯ ನಿರೀಕ್ಷಕ ಆನಂದ್‌, ಗ್ರಾಮ ಲೆಕ್ಕಾಧಿಕಾರಿಗಳಾದ ಲೋಹಿತ್‌, ಮಾರುತಿ, ಪುರಸಭೆ ಅಧಿಕಾರಿಗಳಾದ ಗುರುಪ್ರಸಾದ್, ನವೀನ್, ಪರಶುರಾಮಪ್ಪ, ಚಿತ್ರಪ್ಪ, ಇಮ್ರಾನ್ ಸೇರಿದಂತೆ ಪೌರ ಕಾರ್ಮಿಕರು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಾ|| ಲಕ್ಷ್ಮಿದೇವಿ ಹಾಗೂ ಸಿಬ್ಬಂದಿಗಳಿಂದ ಲಸಿಕೆ ಹಾಕಿಸಿಕೊಂಡರು.

ಮಲೇಬೆನ್ನೂರು : ಪುರಸಭೆ, ನಾಡ ಕಛೇರಿ ಅಧಿಕಾರಿ, ಸಿಬ್ಬಂದಿಗಳಿಗೆ ಕೋವಿಡ್‌ ಲಸಿಕೆ - Janathavani

ಲಸಿಕೆ ಪಡೆದು ಸ್ವಲ್ಪ ಹೊತ್ತಿನ ನಂತರ ಮಾತನಾಡಿದ ಧರಣೇಂದ್ರಕುಮಾರ್, ಆರ್. ರವಿ, ಗುರುಪ್ರಸಾದ್ ಅವರು ಲಸಿಕೆಯಿಂದ ನಮಗೆ ಯಾವುದೇ ಅಡ್ಡಪರಿಣಾಮ ಕಾಣಿಸಿಕೊಂಡಿಲ್ಲ. ಎಲ್ಲರೂ ಧೈರ್ಯವಾಗಿ ಲಸಿಕೆ ಪಡೆಯಬಹುದು ಎಂದರು.

error: Content is protected !!