ಎಸ್‌ಬಿಐ ಗ್ರಾಹಕ ಸ್ನೇಹಿ ಬ್ಯಾಂಕ್

ಹರಪನಹಳ್ಳಿ ಕಾರ್ಯಕ್ರಮದಲ್ಲಿ ಉಪನ್ಯಾಸಕ ಮಲ್ಲಿಕಾರ್ಜುನ್‌ ಮೆಚ್ಚುಗೆ

ಹರಪನಹಳ್ಳಿ, ಜು.4- ಎಸ್‌ಬಿಐ ಬ್ಯಾಂಕ್ ಉತ್ತಮ ಸೇವೆ ನೀಡುತ್ತಿದ್ದು, ಗ್ರಾಹಕ ಸ್ನೇಹಿಯಾಗಿದೆ  ಎಂದು ಉಪನ್ಯಾಸಕ ಎಚ್. ಮಲ್ಲಿಕಾರ್ಜುನ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣದ ಹೊಸಪೇಟೆ ರಸ್ತೆಯ ಬಳಿ ಇರುವ ಎಸ್‌ಬಿಐ ಬ್ಯಾಂಕ್‌ನ 33 ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಮೊದಲು ಸ್ಟೇಟ್ ಬ್ಯಾಂಕ್ ಆಫ್‌ ಮೈಸೂರು ಎಂದಿರುವುದೇ ಕನ್ನಡಿಗರಿಗೆ ಸಂತೋಷವಾಗಿತ್ತು. ಆದರೆ ಗ್ರಾಹಕರ ಅನುಕೂಲಕ್ಕಾಗಿ ಬ್ಯಾಂಕುಗಳು ವಿಲೀನವಾಗಿದೆ. ಇಲ್ಲಿನ ಸಿಬ್ಬಂದಿ ಉತ್ತಮ ಸ್ಪಂದನೆಯೊಂದಿಗೆ ಸೇವೆ ಒದಗಿಸುತ್ತಿದ್ದು, ಅರ್ಹರಿಗೆ ತಕ್ಷಣವೇ ಸಾಲ ಸೌಲಭ್ಯ ಒದಗಿಸುತ್ತಿದ್ದಾರೆ ಎಂದರು. 

ವ್ಯವಸ್ಥಾಪಕ ಕೀರ್ತಿ ಮಾತನಾಡಿ,  ನಮ್ಮ ಬ್ಯಾಂಕ್ ಕೇವಲ ಸಾಲ ಸೌಲಭ್ಯದ ಜೊತೆಗೆ ಇನ್ಸೂರೆನ್ಸ್‌ ಪಾಲಿಸಿ, ಇಕ್ವಿಟ್ ಫಂಡ್ ಸೇರಿದಂತೆ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಬ್ಯಾಂಕಿನ ಸೇವೆಯಲ್ಲಿ ವಿಳಂಬ ಮತ್ತು ವ್ಯತ್ಯಾಸವಾದಲ್ಲಿ ನೇರವಾಗಿ ನಮಗೆ ಸಂಪರ್ಕ ಮಾಡಿ ದೂರು ನೀಡಬಹುದು ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಕೀರ್ತಿ ಸೊಪ್ಪಿನ್,  ವಸಂತಕುಮಾರ, ಶ್ರೀಪಾಲರೆಡ್ಡಿ, ಸೇರಿದಂತೆ ಬ್ಯಾಂಕಿನ  ಸಿಬ್ಬಂದಿ ವರ್ಗದವರು ಹಾಜರಿದ್ದರು.

error: Content is protected !!