ಮಲೇಬೆನ್ನೂರಿನಲ್ಲಿ ಶ್ರದ್ಧಾ-ಭಕ್ತಿಯ ಗಂಧಕ್ಕೆ ಹಿಂದೂಗಳಿಂದ ಪೂಜೆ

ಮಲೇಬೆನ್ನೂರು, ಮಾ.23 – ಪಟ್ಟಣದ ಪ್ರಸಿದ್ಧ ಸೈಯದ್ ಹಬೀಬುಲ್ಲಾ ಷಾ ಖಾದ್ರಿ ಅವರ ಉರುಸು ಅಂಗವಾಗಿ ಗಂಧದ ಮೆರವಣಿಗೆ ಬುಧವಾರ ಸಂಜೆ ಶ್ರದ್ಧಾ-ಭಕ್ತಿಯಿಂದ ನಡೆಯಿತು.

ಬ್ಯಾಂಡ್, ಕುದುರೆ ಕುಣಿತ ಮತ್ತು ಫಕೀರ ಸ್ವಾಮಿಗಳ ಪವಾಡಗಳು ಮೆರವಣಿಗೆಯಲ್ಲಿ ಗಮನ ಸೆಳೆದವು. ಹಿಂದೂ-ಮುಸ್ಲಿಂ ಬಾಂಧವರ ಭಾವೈ
ಕ್ಯತೆಯನ್ನು ಸಾರುವ ಗಂಧದ ಮೆರವಣಿಗೆ ವೇಳೆ ಹಿಂದೂಗಳ ಸಹ ಗಂಧಕ್ಕೆ ಪೂಜೆ ಸಲ್ಲಿಸಿದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಮೆರವಣಿಗೆ ರಾತ್ರಿ ದರ್ಗಾಕ್ಕೆ ಬಂದು ಸೇರಿತು. ನಾಳೆ ಗುರುವಾರ ಇಡೀ ದಿನ ದರ್ಗಾದಲ್ಲಿ ಉರುಸ್‍ ನಡೆಯಲಿದ್ದು, ರಾತ್ರಿ 9.30ಕ್ಕೆ ಕಾರ್ಯಕ್ರಮ ಜರುಗಲಿದೆ. 

error: Content is protected !!