ಜಗಳೂರು : ಡಿಎಸ್‌ಎಸ್‌ ನಕಲಿ ಹೋರಾಟಗಾರರು ಕಂಡಲ್ಲಿ ಮಾಹಿತಿ ಕೊಡಿ

ಜಗಳೂರು, ಫೆ. 23-  ತಾಲ್ಲೂಕಿನಲ್ಲಿ ಕೆಲವರು ದಲಿತ ಸಂಘರ್ಷ ಸಮಿತಿ ಸಂಘಟನಾಕಾರರು ಎಂದು ಹೇಳಿಕೊಂಡು ತಮ್ಮ ಸ್ವಾರ್ಥ ಬದುಕಿಗಾಗಿ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ದಲಿತ ಸಂಘರ್ಷ ಸಮಿತಿ (ಪ್ರೊ.ಕೃಷ್ಣಪ್ಪ ಸ್ಥಾಪಿತ) ಸಂಘಟನೆಗೆ ಭರಮಸಮುದ್ರ ಗ್ರಾಮದ ಪಿ.ವೈ ಮಲ್ಲೇಶ್ ಅಧಿಕೃತ ತಾಲ್ಲೂಕು ಸಂಚಾಲಕರಾಗಿದ್ದು, ಡಿಎಸ್‌ಎಸ್‌ ನಕಲಿ ಹೊರಾಟಗಾರರು ಕಂಡುಬಂದಲ್ಲಿ ಸಂಘಟನೆಗೆ ಮಾಹಿತಿ ಕೊಡಿ ಎಂದು ಡಿಎಸ್‍ಎಸ್ ಜಿಲ್ಲಾ ಉಪಾಧ್ಯಕ್ಷ ಜಿ.ಹೆಚ್. ಶಂಭುಲಿಂಗಪ್ಪ ಹೇಳಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ದಲಿತ ಸಂಘರ್ಷ  (ಕೃಷ್ಣಪ್ಪ ಸ್ಥಾಪಿತ) ಸಮಿತಿಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಅಂಬೇಡ್ಕರ್ ಹೆಸರನ್ನು, ಕೃಷ್ಣಪ್ಪ ಅವರ ಆಶಯಗಳನ್ನು ಧಿಕ್ಕರಿಸಿ ಡಿಎಸ್ ಎಸ್ ವ್ಯಾಪಾರದ ಸರಕಿನಂತಾಗಬಾರದು. ಕೆಲ ವರ್ಷಗಳಿಂದ ಹೆಮ್ಮರವಾಗಿ ಬೆಳೆದಿದ್ದ ದಲಿತ ಸಂಘಟನೆ  ಅಂಬೇಡ್ಕರ್ ಅವರ ಸಿದ್ಧಾಂತ ಅರಿಯದ ಕೆಲವರಿಂದ ಬದ್ದತೆಯ ಹೋರಾಟ ಮರೆತಿದ್ದಾರೆ. ಜಿಲ್ಲಾಧ್ಯಕ್ಷ ಕುಂದುವಾಡ ಮಂಜುನಾಥ್ ಅವರ ಸಮ್ಮುಖದಲ್ಲಿ ನೂತನ ಸಮಿತಿ ರಚನೆಯಾಗಿದ್ದು, ಉಳಿದ ಯಾರೊಬ್ಬ ಅನಧಿಕೃತ ವ್ಯಕ್ತಿಗಳು ಡಿಎಸ್ ಎಸ್ ಸಂಘಟನೆ ಹೆಸರಿನಡಿ ಅಧಿಕಾರಿಗಳ ಸಾರ್ವಜನಿಕ ವಲಯದಲ್ಲಿ ಆಗಮಿಸಿದರೆ ತಾವು ನಮಗೆ ಮಾಹಿತಿ ಕೊಡಿ ಎಂದರು.

ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ (ಪ್ರೊ.ಕೃಷ್ಣಪ್ಪ ಸ್ಥಾಪಿತ) ಸಂಘಟನೆ ಸಂಚಾಲಕ ಪಿ.ವೈ ಮಲ್ಲೇಶ್, ತಿಪ್ಪೇಸ್ವಾಮಿ, ಹೊನ್ನೂರಪ್ಪ, ಪಲ್ಲಾಗಟ್ಟೆ ಮಂಜಪ್ಪ, ಮಹಾಂತೇಶ್, ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

error: Content is protected !!