ಸಾಂಪ್ರದಾಯಿಕ, ಆಧುನಿಕ ಸೀರೆ ಉಟ್ಟು ಸಂಭ್ರಮಿಸಿದ ನೀರೆಯರು

ದಾವಣಗೆರೆ, ಫೆ. 17- ನಗರದ ಜೇನುಗೂಡು ಮಹಿಳಾ ಸಮಾಜದ ವತಿಯಿಂದ ಭಾರತೀಯ ಸಾಂಪ್ರದಾಯಿಕ ಹಾಗೂ ಆಧುನಿಕ ಸೀರೆ ಉಡುವ ಮತ್ತು ಸೀರೆ ಕುರಿತು ಮಾತನಾಡುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಭಾಗವಹಿಸಿದ ಎಲ್ಲಾ ಮಹಿಳೆಯರು ವಿವಿಧ ಬಗೆಯ ಸೀರೆಗಳನ್ನು ಉಟ್ಟು ಸಂಭ್ರಮಿಸಿದರು. ಉಪನ್ಯಾಸಕರಾದ ಶ್ರೀಮತಿ ಸುಮತಿ ಜಯ್ಯಪ್ಪ ಅವರು ಸಂಬಂಧಗಳ ಕುರಿತು ವಿವರಿಸಿದರು.

ಉಷಾ ಉಮೇಶ್ ಪ್ರಥಮ, ವಿಜಯಾ ವೀರೇಂದ್ರ ದ್ವಿತೀಯ, ಗಾಯತ್ರಿ ರವಿ ತೃತೀಯ ಹಾಗೂ ರತ್ನ ಕಾಟ್ವೆ, ತನುಷಾ ಬೆಳ್ಳುಳ್ಳಿ ಅವರು ಸಮಾಧಾನಕರ ಬಹುಮಾನ ಪಡೆದುಕೊಂಡರು.

ಜೇನುಗೂಡು ಮಹಿಳಾ ಸಮಾಜದ ಅಧ್ಯಕ್ಷರಾದ ಸುಜಾತ ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಧ್ಯಕ್ಷರಾದ ಮಧು ಉಮೇಶ್, ಪದಾಧಿಕಾರಿಗಳಾದ ರೇಖಾ ಸಿದ್ಧಪ್ಪ, ರೂಪ ಚನ್ನವೀರ ಕಣವಿ, ವಿದ್ಯಾ ಭಾಸ್ಕರ್, ಕೊಟ್ರಮ್ಮ ಮತ್ತಿತರರಿದ್ದರು.

ಮಮತಾ ಎಸ್. ಭಟ್ ಪ್ರಾರ್ಥಿಸಿದರು. ಸಿ.ಜೆ. ಶಾಂತ ಸ್ವಾಗತಿಸಿದರು. ಮಮತಾ ಕೊಟ್ರೇಶ್ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಪ್ರೀತಿ ಜೆ. ಮಠದ್ ನಿರೂಪಿಸಿದರು. ಎ. ಸುಮ ವಂದಿಸಿದರು.

error: Content is protected !!