ಜಗಳೂರು, ಫೆ. 16- ಭರಮಸಾಗರದಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ನಡೆದ ಭಜನೆ ಸ್ಪರ್ಧೆಯಲ್ಲಿ ಬಿಳಿಚೋಡಿನ ಶ್ರೀ ಬಸವೇಶ್ವರ ಭಜನಾ ತಂಡ ಪ್ರಥಮ ಪ್ರಶಸ್ತಿ ಪಡೆಯುವ ಮೂಲಕ ಜಗಳೂರು ತಾಲ್ಲೂಕಿಗೆ ಕೀರ್ತಿ ತಂದಿದೆ. ಸಿರಿಗೆರೆ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯಿಂದ ಪ್ರಶಸ್ತಿ ಪಡೆದಿದ್ದಾರೆ.
ರಾಜ್ಯದ ಹಲವು ಕಡೆ ನಡೆದ ಭಜನಾ ಸ್ಪರ್ಧೆಗಳಲ್ಲಿ 34 ವರ್ಷಗಳ ಕಾಲ ಸತತವಾಗಿ ಬಿಳಿಚೋಡಿನ ಶ್ರೀ ಬಸವೇಶ್ವರ ಭಜನಾ ತಂಡ ಸ್ಪರ್ಧೆಯಲ್ಲಿ ಭಾಗವಹಿಸಿತ್ತು. ಪ್ರತಿ ವರ್ಷ ಸಿರಿಗೆರೆಯಲ್ಲಿ ರಾಜ್ಯಮಟ್ಟದ ಭಜನಾ ಸ್ಪರ್ಧೆಗಳು ನಡೆಯುತ್ತವೆ. ಸಿರಿಗೆರೆಯಲ್ಲಿ 6 ಬಾರಿ ಭಜನಾ ಪ್ರಶಸ್ತಿ ಬಹುಮಾನವನ್ನು ಪಡೆದಿದ್ದು, ಈ ಬಾರಿ 2025 ರಲ್ಲಿ ಜಗಳೂರಿನಲ್ಲಿ ನಡೆದ ಜಿಲ್ಲಾಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆಯಲಾಗಿದೆ ಎಂದು ಬಿಳಿಚೋಡಿನ ಶ್ರೀ ಬಸವೇಶ್ವರ ಭಜನಾ ತಂಡದ ಮುಖ್ಯಸ್ಥ ಪಿ.ಎಲ್.ಡಿ.ಬ್ಯಾಂಕ್ನ ಮಾಜಿ ಅಧ್ಯಕ್ಷ ಪಿ.ಜಿ.ಪರಮೇಶ್ವರಪ್ಪ ತಿಳಿಸಿದ್ದಾರೆ.
2019-20 ನೇ ಸಾಲಿನಲ್ಲಿ ಬಿಳಿಚೋಡಿನ ಶ್ರೀ ಬಸವೇಶ್ವರ ಭಜನಾ ತಂಡದ ಮುಖ್ಯಸ್ಥ ಪಿ.ಜಿ.ಪರಮೇಶ್ವರಪ್ಪ ಅವರಿಗೆ ಜಾನಪದ ಅಕಾಡೆಮಿ ರಾಜ್ಯ ಪ್ರಶಸ್ತಿ ಸಿಕ್ಕಿದ್ದನ್ನು ಸ್ಮರಿಸಬಹುದು.
ಬಿಳಿಚೋಡಿನ ಶ್ರೀ ಬಸವೇಶ್ವರ ಭಜನಾ ತಂಡದ ಮುಖ್ಯಸ್ಥರಾದ ಪಿ.ಜಿ.ಪರಮೇಶ್ವರಪ್ಪ, ದ್ಯಾಮೇಶ್ ಪೂಜಾರ್, ಶಂಕ್ರಪ್ಪ, ಪಿ.ಎಸ್.ಪ್ರಕಾಶ್, ಪಿ.ಎ.ಚಂದ್ರಪ್ಪ, ಜೆ.ಕರಿಬಸಪ್ಪ, ಪಿ.ನಾಗೇಂದ್ರಪ್ಪ ಶಿಕ್ಷಕರು, ಹಿಮಗಿರಿಯಪ್ಪ, ಕೆ.ನಾಗಪ್ಪ, ಜಿ.ರೇವಣ್ಣ, ಪಿ.ಎಂ.ಕರಿಬಸಪ್ಪ, ಪಿ.ಎಸ್.ಸಿದ್ದೇಶ್, ಬಿ.ವಿ.ನಾಗರಾಜು, ಕೆಂಚಪ್ಪ, ಜಿ.ಚೆನ್ನಬಸಪ್ಪ, ಕೆ.ಎಂ. ರವಿ ಸೇರಿದಂತೆ ಇತರರು ಇದ್ದರು.