ನೀಲಗುಂದ ಬಸವನಗೌಡರಿಗೆ ಅಭಿನಂದನೆ

ನೀಲಗುಂದ ಬಸವನಗೌಡರಿಗೆ ಅಭಿನಂದನೆ

ದಾವಣಗೆರೆ, ಅ.24- ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಹಾಗೂ ರಾಜ್ಯ ಸರ್ಕಾರದ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ರಂಗಭೂಮಿ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಯ ಪ್ರಶಸ್ತಿ ಪುರಸ್ಕೃತರೂ ಆಗಿರುವ ನಗರದ ನೀಲಗುಂದ ಬಸವನ ಗೌಡರಿಗೆ ಹುಬ್ಬಳ್ಳಿಯ ಚೆಲುವ ಕನ್ನಡ ನಾಡು ಸಾಂಸ್ಕೃತಿಕ ಸಂಸ್ಥೆ ಹಾಗೂ ‌ಹಿರೇಹೊನ್ನಿಹಳ್ಳಿಯ ಶ್ರೀ ಗಜಾನನ ನಾಟ್ಯ ಕಲಾ ಸಾಂಸ್ಕೃತಿಕ ಸಂಘದಿಂದ ನಗರದಲ್ಲಿ ಅಭಿನಂದನಾ ಕಾರ್ಯಕ್ರಮ ಜರುಗಿತು.

ಹಿರಿಯ ಪತ್ರಕರ್ತ ಹಾಗೂ ರಂಗಕರ್ಮಿ ಬಸವರಾಜ ಐರಣಿ, ಕವಿ, ರಂಗಕರ್ಮಿ ಗುರುಸಿದ್ದಪ್ಪ ಎಂ. ಬಡಿಗೇರ,  ಶ್ರೀಮತಿ ಸಾವಿತ್ರಮ್ಮ ನೀಲಗುಂದ, ಎನ್.ಎಸ್. ಪಟ್ಟಣಶೆಟ್ಟಿ, ಮೈತ್ರೇಯ ಬಡಿಗೇರ, ರಮೇಶ್ ಪಟ್ಟಣಶೆಟ್ಟಿ ಉಪಸ್ಥಿತರಿದ್ದರು.

ರಂಗ ನಟಿ ಸುಜಾತ ಸ್ವಾಗತಿಸಿದರು. ಗುರುಸಿದ್ದಪ್ಪ ಎಸ್. ಬಡಿಗೇರ ಕಾರ್ಯಕ್ರಮ ನಿರೂಪಿಸಿದರು.

error: Content is protected !!