ಸಿದ್ಧನೂರು ಗ್ರಾಮದಲ್ಲಿ ರೈತ ಸಂಘ ಉದ್ಘಾಟನೆ

ಸಿದ್ಧನೂರು ಗ್ರಾಮದಲ್ಲಿ ರೈತ ಸಂಘ ಉದ್ಘಾಟನೆ

ದಾವಣಗೆರೆ,ಅ.24-ತಾಲ್ಲೂಕಿನ ಸಿದ್ಧನೂರು ಗ್ರಾಮದಲ್ಲಿ ರೈತ ಸಂಘದ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂಘದ ರಾಜ್ಯಾಧ್ಯಕ್ಷ ಬಡಗಲಪುರದ ನಾಗೇಂದ್ರ, ರಾಜ್ಯ ಹಿರಿಯ ಉಪಾಧ್ಯಕ್ಷ ಕೆ.ಪಿ. ಬೂತಯ್ಯ ಕಾಲುವೆಹಳ್ಳಿ, ರಾಜ್ಯ ಕಾರ್ಯದರ್ಶಿ  ಅರುಣ್ ಕುಮಾರ್ ಕುರುಡಿ ಅವರುಗಳ ನೇತೃತ್ವದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ.ಎಂ. ಮಂಜಪ್ಪ ಅಧ್ಯಕ್ಷತೆ ವಹಿಸಿದ್ದರು.

ಸಿದ್ಧನೂರು ಗ್ರಾಮ ಘಟಕದ ಅಧ್ಯಕ್ಷರಾಗಿ ಕೆ.ಆರ್. ಮರುಳಸಿದ್ಧಪ್ಪ, ಗೌರವಾಧ್ಯಕ್ಷರಾಗಿ ಕೆ.ಆರ್. ರವಿಕುಮಾರ್, ಉಪಾಧ್ಯಕ್ಷರಾಗಿ  ಡಿ.ವಿ.ಜಯಪ್ಪ, ಕೆ.ಎಸ್. ನಾಗರಾಜ್ ಮತ್ತು ಎಸ್.ವಿ.ಶಿವಕುಮಾರ್,  ಪ್ರಧಾನ ಕಾರ್ಯದರ್ಶಿಗಳಾಗಿ  ಎಸ್.ಸಿ. ಯೋಗರಾಜ್, ಎಸ್.ಎಂ. ರೇವಣಸಿದ್ಧಪ್ಪ, ಖಜಾಂಚಿಯಾಗಿ ಕೆ.ಆರ್. ನಾಗರಾಜ್, ಸಹಕಾರ್ಯದರ್ಶಿಯಾಗಿ ಕೆ.ಬಿ.ಸಿದ್ಧೇಶ್ ಅವರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

error: Content is protected !!