ಸ್ಕೌಟ್ ಮತ್ತು ಗೈಡ್‌ನಿಂದ ವಿವೇಕಾನಂದರ ಜಯಂತಿ

ಸ್ಕೌಟ್ ಮತ್ತು ಗೈಡ್‌ನಿಂದ ವಿವೇಕಾನಂದರ ಜಯಂತಿ

ದಾವಣಗೆರೆ, ಜ.12- ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ, ದಾವಣಗೆರೆ ವತಿಯಿಂದ ಡಿ.ಆರ್.ಎಂ ಸ್ಕೌಟ್ ಭವನದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ಜಿಲ್ಲಾ ಮಟ್ಟದ ಗೀತಗಾಯನ ಹಾಗೂ ಚಿತ್ರಕಲೆ ಸ್ಪರ್ಧೆಯನ್ನು ಪ್ರೀತಿಯ ಕಬ್ಸ್ ಮತ್ತು ಬುಲ್‌ಬುಲ್ ಸ್ಕೌಟ್ಸ್ ಮತ್ತು ಗೈಡ್ಸ್, ಮಕ್ಕಳೊಂದಿಗೆ ಮುರುಘರಾಜೇಂದ್ರ ಜೆ. ಚಿಗಟೇರಿ ಜಿಲ್ಲಾ ಮುಖ್ಯ ಆಯುಕ್ತರು ಇವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. 

ಎ.ಪಿ. ಷಡಕ್ಷರಪ್ಪ, ಬೂಸ್ನೂರು ವಿಶ್ವನಾಥ್, ಶ್ರೀಮತಿ ಮಂಗಳ ವಿಶ್ವನಾಥ್, ಶ್ರೀಮತಿ ರತ್ನ, ಶ್ರೀಮತಿ ಶಾರದ ಮಾಗಾನಹಳ್ಳಿ, ಶ್ರೀಮತಿ ಸುಖವಾನಿ, ಶ್ರೀಮತಿ ಅಶ್ವಿನಿ ಹಾಲಪ್ಪ,  ಶ್ರೀಮತಿ ವಾಣಿ ಓಂಕಾರಪ್ಪ, ಪಿ.ಜಿ. ಸುರೇಶ್, ಶ್ರೀಮತಿ ಕವಿತಾ, ಶ್ರೀಮತಿ ಆಶಾ, ಶ್ರೀಮತಿ ನಾಗಮಣಿ, ಸಜ್ಜನ ರೇಣುಕಾ, ಸ್ಕೌಟ್ ಮಾಸ್ಟರ್ ಮತ್ತು ಗೈಡ್ ಕ್ಯಾಪ್ಟನ್‌ರವರು ಮತ್ತು ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

error: Content is protected !!