ದಾವಣಗೆರೆಯ ಶ್ರೀ ಕನ್ಯಕಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಅಕ್ಷಯ ತದಿಗೆ ಮಿತಿಯಲ್ಲಿ ಇಂದು ವಾಸವಿ ಜಯಂತಿ ಪೂಜೆ, ಅಮ್ಮನವರಿಗೆ ಅಲಂಕಾರ ಸೇವೆ ಮತ್ತು ಪ್ರಸಾದ ವಿನಿಯೋಗವಿರುತ್ತದೆ.
ಬೆಳಿಗ್ಗೆ 10ರಿಂದ ಅಮ್ಮನವರಿಗೆ ವಿಶೇಷ ಪೂಜೆ, ಗಣ ಹೋಮ, ನವಗ್ರಹ ಹೋಮ, ಶ್ರೀ ಕನ್ಯಾಕಮಪರಮೇಶ್ವರಿ ಹೋಮ ಮತ್ತು ಸಂಜೆ 4ರಿಂದ ವಾಸವಿ ಭಜನಾ ಮಂಡಳಿಯಿಂದ ವಾಸವಿ ಕುಂಕುಮಾರ್ಚನೆ ಮತ್ತು ಶ್ರೀ ಶಂಕರ್ ಭಗವತ್ಪಾದ ವಿರಚಿತ ಕಲ್ಯಾಣ ವೃಷ್ಠಿ ಸ್ತವ: ಪಠನೆ. ಹಾಗೂ ಸಂಜೆ 6.30ರಿಂದ ವಾಸವಿ ಯುವಜನ ಸಂಘ ಇವರಿಂದ `ವಾಸವಿ ಪುಷ್ಪಾಭಿಷೇಕಂ’ ಹಾಡುಗಳೊಂದಿಗೆ ದೇವಿಗೆ ಪುಷ್ಪಾರ್ಚನೆ ನಡೆಯಲಿದೆ ಎಂದು ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನ ಸಂಘದ ಅಧ್ಯಕ್ಷ ಆರ್.ಎಲ್. ಪ್ರಭಾಕರ್, ಕಾರ್ಯದರ್ಶಿ ಜೆ. ರವಿಂದ್ರ ಗುಪ್ತ ತಿಳಿಸಿದ್ದಾರೆ.