ರಾಮ ಮಂತ್ರಾಕ್ಷತೆ ವಿತರಣೆಯ ಶೋಭಾಯಾತ್ರೆ

ರಾಮ ಮಂತ್ರಾಕ್ಷತೆ ವಿತರಣೆಯ ಶೋಭಾಯಾತ್ರೆ

ದಾವಣಗೆರೆ, ಜ. 9 – ನಗರ ಪಾಲಿಕೆಯ 38ನೇ ವಾರ್ಡಿನ ಎಂ.ಸಿ.ಸಿ. `ಬಿ’ ಬ್ಲಾಕ್‌ನಲ್ಲಿ ಮನೆ ಮನೆಗೆ ಮಂತ್ರಾಕ್ಷತೆಯ ಅಭಿಯಾನದ ನಿಮಿತ್ತವಾಗಿ ಭವ್ಯ ಶೋಭಾಯಾತ್ರೆ ನಡೆಸಲಾಯಿತು.

ಶೋಭಾಯಾತ್ರೆಯಲ್ಲಿ ಪಾಲ್ಗೊಂಡ ಮಹಿಳೆಯರು ರಾಮ ಭಜನೆಯಲ್ಲಿ ಮಿಂದೆದ್ದರು. ದಾರಿಯುದ್ದಕ್ಕೂ ಸಾರ್ವಜನಿಕರ ಅಭೂತಪೂರ್ವ ಸ್ವಾಗತದೊಂದಿಗೆ ಶ್ರೀರಾಮಚಂದ್ರ ಭಾವಚಿತ್ರದೊಂದಿಗೆ ವಾರ್ಡಿನ ಶ್ರೀ ಗಣಪತಿ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆಯು ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಕೊನೆಗೊಂಡಿತು. 

ಶೋಭಾಯಾತ್ರೆಯಲ್ಲಿ ಹರಿಹರದ ಶಾಸಕ ಬಿ.ಪಿ.ಹರೀಶ್, ಲೋಕಿಕೆರೆ ನಾಗರಾಜ್, ಡಾ.ರವಿಕುಮಾರ ಟಿ.ಜಿ., ಶ್ರೀನಿವಾಸ ದಾಸಕರಿಯಪ್ಪ, ವಾರ್ಡ್ ಪ್ರಮುಖರಾದ ಪ್ರಶಾಂತ್,
ಓಬಿಸಿ ಪ್ರಧಾನ ಕಾರ್ಯದರ್ಶಿ ಪೋತುಲ ಶ್ರೀನಿವಾಸ್ ಬಿ.ಎಸ್. ಮೋಹನ್ ರಾವ್, ನಿರ್ಮಲಾ, ಶ್ರೀಮತಿ ವೇದಾ ಅವಿನಾಶ್, ಶ್ರೀಮತಿ ಗಾಯತ್ರಿ ಬಾಳಿಗ, ಶ್ರೀನಿವಾಸ ಹಾಗೂ ಇತರರು ಪಾಲ್ಗೊಂಡಿದ್ದರು.

error: Content is protected !!