ಬನ್ನಿಕೋಡು : ಆರೋಗ್ಯ ತಪಾಸಣಾ ಶಿಬಿರ

ಬನ್ನಿಕೋಡು : ಆರೋಗ್ಯ ತಪಾಸಣಾ ಶಿಬಿರ

ಹೊನ್ನಾಳಿ, ಜ. 9-  ಶ್ರೀನಿವಾಸ ಆಸ್ಪತ್ರೆ ಹಾಗೂ ವಿಕಾಸ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸ್ವಯಂ ಸೇವಾ ಸಂಸ್ಥೆ (ದಾವಣಗೆರೆ) ಇವರ ಸಂಯುಕ್ತಾಶ್ರಯದಲ್ಲಿ ಬನ್ನಿಕೋಡು ಗ್ರಾಮದಲ್ಲಿ ಈಚೆಗೆ  ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು.  ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಚಾರಿಟೇಬಲ್ ರಾಜ್ಯಾಧ್ಯಕ್ಷರಾದ  ಪುಷ್ಪಲತಾ ಪವಿತ್ರ ರಾಜ್,  ವಿಕಾಸ ಸಂಸ್ಥೆಯ ಅಧ್ಯಕ್ಷರಾದ ಕೆ. ಮಹಾಲಕ್ಷ್ಮಿ, ರಂಜಿತ, ಸಿದ್ದಲಿಂಗಪ್ಪ, ಗ್ರಾ.ಪಂ. ಸದಸ್ಯ ಕೆ.ಜಿ. ಬಸವನಗೌಡ, ಕೋಟೋಜಿ ರಾವ್, ಉಮಾ, ಬಿ. ಲೋಕೇಶ್, ಶಾಲಾ ಮುಖ್ಯ ಶಿಕ್ಷಕರಾದ ಜಿ.ಓ. ವಿಶ್ವಭಾರತಿ, ಬಿ.ವಿ. ಮಂಜಪ್ಪ ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!