ರಾಣೇಬೆನ್ನೂರಿನ ಶ್ರೀ ಬಸವೇಶ್ವರ ಅರ್ಬನ್ ಬ್ಯಾಂಕ್‌ಗೆ ಆಯ್ಕೆ

ರಾಣೇಬೆನ್ನೂರಿನ ಶ್ರೀ ಬಸವೇಶ್ವರ ಅರ್ಬನ್ ಬ್ಯಾಂಕ್‌ಗೆ ಆಯ್ಕೆ

ರಾಣೇಬೆನ್ನೂರು, ಡಿ.26- ಇಲ್ಲಿನ ಶ್ರೀ ಬಸವೇಶ್ವರ ಅರ್ಬನ್ ಬ್ಯಾಂಕ್  ನಿರ್ದೇಶಕ ಮಂಡಳಿಗೆ  ಬಿಜೆಪಿ ಬೆಂಬಲಿತ ಎಲ್ಲ  13 ಜನರು  ಅವಿರೋಧವಾಗಿ ಆಯ್ಕೆಯಾಗಿದ್ದು, ಕಛೇರಿಯ ಲ್ಲಿಂದು ಅವರನ್ನು ಗೌರವಿಸಲಾಯಿತು. 

ಇದೇ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಡಾ.ಬಸವರಾಜ ಕೇಲಗಾರ ಅವರನ್ನು ಸಹ ಮಾಜಿ ಶಾಸಕ ಅರುಣಕುಮಾರ ಪೂಜಾರ ಸನ್ಮಾನಿಸಿದರು.

ಈಶ್ವರ್‌ ಹಾವನೂರ, ಪರಮೇಶ್‌ ಯಡಿಯಾಪೂರ, ವಿಷ್ಣು ಜಿಂಗಾಡೆ, ಲತಾ ಬೇತೂರ, ಶೋಭಾ ದೇವಗಿರಿಮಠ, ಮಂಜುನಾಥ್‌ ಓಲೇಕಾರ, ಚನ್ನವೀರಪ್ಪ ಅಸುಂಡಿ, ಪರಮೇಶ್‌ ಗೌಳಿ, ರಾಜೇಂದ್ರಕುಮಾರ್‌ ತಿಳವಳ್ಳಿ, ವೀರೇಶ್‌ ಜಂಬಗಿ, ಶಿವಕುಮಾರ್‌ ನರಸಗೊಂಡರ, ಶಿವಪ್ಪ ರೊಡ್ಡನವರ ಮತ್ತು ಶಂಭುಲಿಂಗ ಕಟಗಿಹಳ್ಳಿ  ಅವಿರೋಧವಾಗಿ ಆಯ್ಕೆಯಾದ ಅರ್ಬನ್ ಬ್ಯಾಂಕ್ ನಿರ್ದೇಶಕರು.

ಎಸ್.ಎಸ್.ರಾಮಲಿಂಗಣ್ಣನವರ, ಭಾರತಿ ಜಂಬಗಿ, ಡಾ. ಗಣೇಶ ದೇವಗಿರಿಮಠ, ದೀಪಕ್ ಹರಪನಳ್ಳಿ, ಸಿದ್ದು ಚಿಕ್ಕಬಿದರಿ, ಎ.ಬಿ. ಪಾಟೀಲ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

error: Content is protected !!