ಬೆಳ್ಳೂಡಿ ಮಠದಲ್ಲಿ ಸಂಭ್ರಮದ ಕಾರ್ತಿಕೋತ್ಸವ

ಬೆಳ್ಳೂಡಿ ಮಠದಲ್ಲಿ ಸಂಭ್ರಮದ ಕಾರ್ತಿಕೋತ್ಸವ

ಮಲೇಬೆನ್ನೂರು, ಡಿ.18- ಕಾಗಿನೆಲೆ ಕನಕ ಗುರುಪೀಠದ ಬೆಳ್ಳೂಡಿ ಶಾಖಾಮಠದಲ್ಲಿ ಸೋಮವಾರ ರಾತ್ರಿ ಹಮ್ಮಿಕೊಂಡಿದ್ದ ಕಾರ್ತಿಕೋತ್ಸವವು ಶ್ರೀ ನಿರಂಜನಾನಾನಂದ ಪುರಿ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಹಾಗೂ ಅಪಾರ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.

ಮಠದಲ್ಲಿರುವ ಶ್ರೀ ರೇವಣಸಿದ್ದೇಶ್ವರ ದೇವರಿಗೆ ಬೆಳ್ಳೂಡಿ ಮತ್ತು ಬನ್ನಿಕೋಡು ಗ್ರಾಮಗಳ ಬೀರದೇವರಗಳ ಸಾನ್ನಿಧ್ಯದಲ್ಲಿ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಅವರು ವಿಶೇಷ ಪೂಜೆ ಸಲ್ಲಿಸಿ, ಫಳಾರ ನೈವೇದ್ಯ ನೆರವೇರಿಸಿ, ಕಾರ್ತಿಕೋತ್ಸವಕ್ಕೆ ಚಾಲನೆ ನೀಡಿದರು.

ನಂತರ ಮಠದ ಆವರಣದಲ್ಲಿ ಶ್ರೀಗಳೊಂದಿಗೆ ಭಕ್ತರು ಎಣ್ಣೆ-ಬತ್ತಿ ದೀಪ ಹಚ್ಚಿ ಸಂಭ್ರಮಿಸಿದರು. ಪಟಾಕಿಗಳ ಸಿಡಿತ ಬಾನಂಗಳದಲ್ಲಿ ಬಣ್ಣ ಬಣ್ಣದ ಚಿತ್ತರ ಮೂಡಿಸಿ ಎಲ್ಲರ ಗಮನ ಸೆಳೆದವು.

ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಬೆಳ್ಳೂಡಿ ಗ್ರಾ.ಪಂ. ಅಧ್ಯಕ್ಷ ಬಿ.ಉಮೇಶ್, ಮುಖಂಡರಾದ ಕೊಳೇನಹಳ್ಳಿ ಸತೀಶ್, ಕರೇಕಟ್ಟೆ ಲೋಕೇಶ್, ಎಸ್.ಜಿ.ಪರಮೇಶ್ವರಪ್ಪ, ಕೆ.ಪಿ.ಗಂಗಾ ಧರ್, ಐರಣಿ ಅಣ್ಣಪ್ಪ, ಎಕ್ಕೆಗೊಂದಿ ಹಾಲಪ್ಪಜ್ಜ, ಮೆಡ್ಲೇರಿ ಹುಲಿಯಪ್ಪ, ಮಲೇಬೆನ್ನೂರಿನ ಪಿ.ಹೆಚ್.ಶಿವಕುಮಾರ್, ಪೂಜಾರ್ ಮಲ್ಲಿಕಾರ್ಜುನ್, ಎಳೆಹೊಳೆ ಕುಮಾರ್, ಡಿ.ಕೆ.ಸಿದ್ದನಗೌಡ, ಭಾನುವಳ್ಳಿಯ ಹೆಚ್.ಎಸ್.ಕರಿಯಪ್ಪ, ಪೂಜಾರ್ ಹಾಲಪ್ಪ, ಬಲ್ಲೂರು ಕೆಂಚಪ್ಪ, ವಕೀಲ ಪಾಲಾಕ್ಷಿ, ಬೆಳ್ಳೂಡಿಯ ಪೂಜಾರ್ ತಿಪ್ಪಣ್ಣ, ಕೆಂಚಪ್ಪ, ಸಂಜು, ಪ್ರಭು, ಸಿದ್ದೇಶ್, ವೆಂಕಟೇಶ್, ನಿಟ್ಟೂರು ತಿಪ್ಪೇಶಿ, ಜಿ.ಟಿ.ಕಟ್ಟಿ ಮಲ್ಲೇಶ್, ಕೊಮಾರನಳ್ಳಿಯ ಎಸ್.ಎಂ.ಮಂಜುನಾಥ್, ಹೂವಿನ ಹಡಗಲಿ ತಹ ಶೀಲ್ದಾರ್ ಶರಣಮ್ಮ, ಕಾಗಿನೆಲೆ ಪಿಎಸ್ಐ ಭಾರತಿ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.

error: Content is protected !!