ಹರಿಹರ : ಆಂಗ್ಲ ನಾಮ ಫಲಕಗಳನ್ನು ತೆರವುಗೊಳಿಸಲು ಒತ್ತಾಯ

ಹರಿಹರ : ಆಂಗ್ಲ ನಾಮ ಫಲಕಗಳನ್ನು ತೆರವುಗೊಳಿಸಲು ಒತ್ತಾಯ

ಹರಿಹರ, ಡಿ,18 –  ನಗರದಲ್ಲಿರುವ ಅಂಗಡಿ ವ್ಯಾಪಾರಸ್ಥರು ಆಂಗ್ಲ ನಾಮ ಫಲಕಗಳನ್ನು, ಜಾಹೀರಾತು ಫಲಕಗಳನ್ನು ಪೆಟ್ರೋಲ್ ಬಂಕ್ ಜಾಹೀರಾತು ಫಲಕಗಳನ್ನು ತೆರವು ಗೊಳಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಗ್ರೇಡ್2 ತಹಶಿಲ್ದಾರ್ ರವರೆಗೆ ಮನವಿಯನ್ನು ಅರ್ಪಿಸಿದರು. 

ಈ ವೇಳೆ ಮಾತನಾಡಿದ ಮುಖಂಡರು ನಗರದ ಅನೇಕ ವ್ಯಾಪಾರಸ್ಥರು ಆಂಗ್ಲ ಭಾಷೆಯ ನಾಮ ಫಲಕಗಳನ್ನು ಹಾಕಿದ್ದು ಇಲ್ಲಿಂದ 15 ದಿನಗಳ ಒಳಗಾಗಿ ಆಂಗ್ಲ ನಾಮಫಲಕಗಳನ್ನು ತೆರವು ಗೊಳಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರಾಜೇಶ್,  ಅಮಾನುಲ್ಲಾ, ಕೆ. ರವಿ ಕುಮಾರ್‌,  ಶಶಿ ನಾಯಕ್, ಯಮನೂರ, ಮೆಹಬೂಬ್  ಅಲಿ,  ಇಬ್ರಾಹಿ , ಖಲೀಲ್,  ಬರ್ಕತ್ ಅಲಿ, ಆರ್. ಮಂಜುನಾಥ್, ಸಾಧಿಕ್  ಅಹಮದ್, ಫಯಾಜ್,   ಮುಸ್ತಾಫ ಖಾನ್, ಹಜರತ್ ಅಲಿ ಇತರರು ಹಾಜರಿದ್ದರು.

error: Content is protected !!