ದೇಶಕ್ಕೆ ಮೋದಿ, ದಾವಣಗೆರೆಗೆ ಸಿದ್ದಣ್ಣ ಮತ್ತೊಮ್ಮೆ ಅಧಿಕಾರಕ್ಕೆ

ದೇಶಕ್ಕೆ ಮೋದಿ, ದಾವಣಗೆರೆಗೆ ಸಿದ್ದಣ್ಣ ಮತ್ತೊಮ್ಮೆ ಅಧಿಕಾರಕ್ಕೆ

ದಾವಣಗೆರೆ, ಡಿ. 16 – ದೇಶದಲ್ಲಿ ಮೋದಿ, ದಾವಣಗೆರೆಗೆ ಸಿದ್ದಣ್ಣ ಮತ್ತೊಮ್ಮೆ ಅಧಿಕಾರಕ್ಕೆ ಬರುವುದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ ಎಂದು ಶೋಷಿತ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, 2024ರ ಚುನಾವಣೆಯಲ್ಲಿ ಬಿಜೆಪಿಯೇ ಕೇಂದ್ರದಲ್ಲಿ ಅಧಿಕಾರ ಹಿಡಿಯುವುದು ಎಂದಿದ್ದಾರೆ. ಸಿದ್ದೇಶ್ವರ ಅವರು ದಾವಣಗೆರೆಯ ಮನೆ ಮಗನಿದ್ದಂತೆ, ಈ ಬಾರಿಯೂ ಅವರೇ ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದರು. 

ಬಿಜೆಪಿ ಹಿರಿಯ ಮುಖಂಡ ಬಿ.ಟಿ. ಸಿದ್ದಪ್ಪ ಮಾತನಾಡಿ, ಸಾವಿರಾರು ಕೋಟಿ ಅನುದಾನ ತಂದು ದಾವಣಗೆರೆ ಜಿಲ್ಲೆಯನ್ನು ಅಭಿವೃದ್ಧಿ ಮಾಡಿರುವ  ಸಂಸದ ಸಿದ್ದೇಶ್ವರ ಅವರೇ ಮುಂದಿನ ಸಂಸದರು, ಇದು ಸೂರ್ಯ ಚಂದ್ರ ಎಷ್ಟು ಸತ್ಯವೋ, ಸಿದ್ದಣ್ಣ ಸಂಸದರಾಗುವುದು ಅಷ್ಟೇ ಸತ್ಯ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಉಪಾಧ್ಯಕ್ಷ  ಶ್ರೀನಿವಾಸ್ ದಾಸ ಕರಿಯಪ್ಪ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಪಾಟೀಲ್, ಮಾತೃ ದೇವಭವ ಸಂಸ್ಥೆಯ ಸಂಸ್ಥಾಪಕ ಎಸ್.ಪಿ. ಶ್ರೀನಿವಾಸ್.ನವೀನ್ ಕುಮಾರ್ ಗುಬ್ಬಿ, ಆರ್.ವಿ. ಲಕ್ಷ್ಮಿಕಾಂತ್  ಇನ್ನೂ ಮುಂತಾದವರಿದ್ದರು.

error: Content is protected !!