ಹರಪನಹಳ್ಳಿ, ಆ. 21- ಕೆ.ಪಿ.ಸಿ.ಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ದೇವೇಂದ್ರಪ್ಪ ನವರ ಹುಟ್ಟು ಹಬ್ಬದ ಪ್ರಯುಕ್ತ ಹೊಸಪೇಟೆ ರಸ್ತೆಯಲ್ಲಿರುವ ಸಾರ್ವಜನಿಕ ಆಸ್ವತ್ರೆ ಹಾಗೂ ಬೇಬಿ ಕೇರ್ ಸನ್ ರೈಸ್ ಆಸ್ವತ್ರೆಗಳ ಹೊರ ಮತ್ತು ಒಳ ರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ವಿತರಣೆ ಮಾಡಲಾಯಿತು.
ಈ ವೇಳೆ ವಿಜಯನಗರ ಜಿಲ್ಲಾ ಪದವಿಧರ ಕ್ಷೇತ್ರದ ಅಧ್ಯಕ್ಷ ಎಂ. ರಮೇಶ್, ಕೆ.ಪಿ.ಸಿ.ಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಉಪ್ಪಾರ್, ಮುಖಂಡರಾದ ಎಂ. ಮೋಹನ್, ಯು. ಮಂಜುನಾಥ, ಎಂ. ಯೂನೂಸ್, ಎಂ. ವೀರೇಶ್, ವೆಂಕಟೇಶ, ಶಾರುಖ್ ಸೇರಿದಂತೆ ಇತರರು ಇದ್ದರು.