ಕಂಚಿಕೆರೆ ಗ್ರಾ.ಪಂ. ಅಧ್ಯಕ್ಷರಾಗಿ ಹಾಲಮ್ಮ

ಕಂಚಿಕೆರೆ ಗ್ರಾ.ಪಂ. ಅಧ್ಯಕ್ಷರಾಗಿ ಹಾಲಮ್ಮ

ದಾವಣಗೆರೆ, ಆ.11- ತಾಲ್ಲೂಕಿನ ಕಂಚಿಕೆರೆ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ವಿದ್ಯಾಶ್ರೀ ಬಸವರಾಜ್ ರಾಜೀನಾಮೆ ಸಲ್ಲಿಸಿದ್ದರಿಂದ ತೆರೆವಾದ ಸ್ಥಾನಕ್ಕೆ ಇಂದು ನಡೆದ  ಚುನಾವಣೆಯಲ್ಲಿ ದಾದಾಪುರದ ಹಾಲಮ್ಮ ನೀಲಪ್ಪ ಒಬ್ಬರೇ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರಿಂದ ಹಾಲಮ್ಮ ನೀಲಪ್ಪ ಅವರನ್ನೇ ಅವಿರೋಧವಾಗಿ ಆಯ್ಕೆ ಮಾಡಲಾಯಿತೆಂದು ಚುನಾವಣಾಧಿಕಾರಿ ತಹಶೀಲ್ದಾರ್ ಬಿ.ವಿ. ಗಿರೀಶ್ ಬಾಬು ಘೋಷಣೆ ಮಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ರೆಡ್ಡಿ ಶಾಂತಕುಮಾರ್, ಸದ್ಯೋಜಾತಪ್ಪ, ಬಿದ್ರಿ ಸುನೀಲ್, ಮಡಿವಾಳರ ಮಂಜುನಾಥ್, ಕೆಂಚನಗೌಡ, ಗುಂಡಗತ್ತಿ ಬಸಣ್ಣ, ಮಡಿವಾಳರ ಕೆಂಚಪ್ಪ, ಬಾರಿಕರ ಮಂಜಣ್ಣ, ಕ್ಯಾರಕಟ್ಟೆ ಬಸವರಾಜಪ್ಪ, ಪರುಸಪ್ಪ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆಂಚಪ್ಪ, ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರು, ಪಿಡಿಒ. ಶಿವಕುಮಾರ್ ನಾಯ್ಕ್ ಹಾಗೂ ಕಂಚಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಮುಖಂಡರು ಹಾಜರಿದ್ದರು.

error: Content is protected !!