ದಾವಣಗೆರೆ, ಆ. 10- ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ (ಕರ್ನಾಟಕ), ಶ್ರೀ ಸಿದ್ದಗಂಗಾ ಸಂಸ್ಥೆ ವತಿಯಿಂದ ಸನ್ ರೈಸ್ ಡೇ ಹಾಗೂ ಸ್ಕಾರ್ಫ್ ಡೇ ಅನ್ನು ಸಿದ್ದಗಂಗಾ ಶಾಲೆಯ ಕಬ್ಸ್, ಬುಲ್ ಬುಲ್, ಸ್ಕೌಟ್ ಮತ್ತು ಗೈಡ್ಸ್ ಘಟಕಗಳಿಂದ ವಿಶೇಷವಾಗಿ ಆಚರಿಸಲಾಯಿತು.
ಸ್ಥಳೀಯ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಚೇರ್ಮನ್ ಹಾಗೂ ಶಾಲಾ ಪ್ರಾಂಶುಪಾಲರಾದ ಜಸ್ಟಿನ್ ಡಿಸೋಜಾ, ಉಪಾಧ್ಯಾಯರಾದ ಉಮೇಶ್ ಹಾಗೂ ಪುಟ್ಟಸ್ವಾಮಿ ಇವರಿಗೆ ಸ್ಕಾರ್ಫ್ ಹಾಕುವುದರ ಮೂಲಕ ಸದಸ್ಯರನ್ನಾಗಿ ಮಾಡಿಕೊಂಡರು. ಕಾರ್ಯದರ್ಶಿ ಶ್ರೀಮತಿ ಶಶಿಕಲಾ ಪ್ರತಿಜ್ಞೆ ವಿಧಿ ಬೋಧಿಸಿದರು.