ಮಲೇಬೆನ್ನೂರು – ಜಿಗಳಿ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಹರೀಶ್ ಖಡಕ್ ಸೂಚನೆ

ಮಲೇಬೆನ್ನೂರು – ಜಿಗಳಿ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಹರೀಶ್ ಖಡಕ್ ಸೂಚನೆ

ಮಲೇಬೆನ್ನೂರು, ಆ. 8- ಕೊಕ್ಕನೂರು ಗ್ರಾ.ಪಂ ಅಧ್ಯಕ್ಷ  ಆನಂದ್ ಪಾಟೀಲ್ ಅವರ ಪತ್ನಿ ಮತ್ತು ಪುತ್ರಿ ಅವರು ಶನಿವಾರ ಅಕಾಲಿಕ ಮರಣವನ್ನು ಹೊಂದಿದ ಕಾರಣ, ಅವರ ಮನೆಯವರಿಗೆ ಸಂತಾಪ ಸೂಚಿಸಲು ಮೂಗಿನಗೊಂದಿಗೆ ತೆರಳುವ ಸಂದರ್ಭದಲ್ಲಿ ಮಾರ್ಗ ಮಧ್ಯದಲ್ಲಿ ಮಲೇಬೆನ್ನೂರು – ಜಿಗಳಿ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿರುವುದನ್ನು ಶಾಸಕ  ಬಿ ಪಿ ಹರೀಶ್ ವೀಕ್ಷಿಸಿದರು. 

ಇದೇ ವೇಳೆ ಸ್ಥಳದಲ್ಲಿದ್ದ ಬೆಂಗಳೂರಿನಿಂದ ಆಗಮಿಸಿದ್ದ ಎಸ್‌ ಹೆಚ್ ಡಿ ಪಿ ಎಇಇ ಆಶಾ, ಸಹಾಯಕ ಅಭಿಯಂತರ ಶಿವರುದ್ರಪ್ಪ ಅವರಿಂದ ಕಾಮಗಾರಿಯ ವಿಳಂಬದ ಬಗ್ಗೆ  ಮಾಹಿತಿ ಪಡೆದರು. 

ಕಂಟ್ರ್ಯಾಕ್ಟರ್  ವಿರುಪಾಕ್ಷಪ್ಪ ಬಳೆ ಅವರಿಗೆ ಮೊಬೈಲ್  ಮುಖಾಂತರ ಮಾತನಾಡಿದ ಶಾಸಕ ಹರೀಶ್ ಅವರು ನೆಪ ಹೇಳದೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಪ್ರಯಾಣಿಸಲು ಅನುಕೂಲ ಮಾಡಿಕೊಡಲು ಖಡಕ್
ಸೂಚನೆ ನೀಡಿದರು. 

ಈ ಸಂದರ್ಭದಲ್ಲಿ ಹಾಜರಿದ್ದ ಜಿಗಳಿ ಗ್ರಾಮಸ್ಥರು ಒಂದು ವರ್ಷದಿಂದ ಕಾಮಗಾರಿ ವಿಳಂಬವಾಗಿದ್ದು ರಸ್ತೆ ಸಂಚಾರಕ್ಕೆ ತೀವ್ರ ತೊಂದರೆ ಆಗಿದೆ ಎಂದು ಕಂಟ್ರಾಕ್ಟರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

error: Content is protected !!