ಗ್ರಾಮದೇವತೆ ಮೆರವಣಿಗೆ, ವಿಶೇಷ ಪೂಜೆ

ಗ್ರಾಮದೇವತೆ ಮೆರವಣಿಗೆ, ವಿಶೇಷ ಪೂಜೆ

ಹರಿಹರ, ಆ. 3 – ನಗರದ ಗ್ರಾಮದೇವತೆ ಊರಮ್ಮ ದೇವಿಯನ್ನು ಶಿಭಾರ ವೃತ್ತದ ಮೂಲ ದೇವಸ್ಥಾನದಿಂದ, ಹೊಸಭರಂಪುರ ಬಡಾವಣೆ ಶ್ರೀ ಗ್ರಾಮದೇವತೆ ದೇವಸ್ಥಾನಕ್ಕೆ ಸಂಜೆ ಅದ್ಧೂರಿ ಮೆರವಣಿಗೆಯೊಂದಿಗೆ ಬರ ಮಾಡಿಕೊಳ್ಳಲಾಯಿತು. ಮೆರವಣಿಗೆಯಲ್ಲಿ ಡೊಳ್ಳು, ಡ್ರಮ್ ಸೆಟ್ ಸೇರಿದಂತೆ ಕಲಾ ಮೇಳಗಳು ಮೆರವಣಿಗೆಗೆ ಮೆರಗನ್ನು ನೀಡಿದವು.

ಹೊಸಭರಂಪುರ ಬಡಾವಣೆಯ ದೇವಸ್ಥಾನದಲ್ಲಿ ಆಷಾಢ ಮಾಸದ ಅಂಗವಾಗಿ ದೇವಿಗೆ ವಿಶೇಷ ಪೂಜೆ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ , ಪಡ್ಲಿಗೆ ತುಂಬುವಿಕೆ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ನಡೆಸಲಾಗುತ್ತದೆ. 

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ನಿಂಬಕ್ಕ ನಿಂಗಪ್ಪ ಚಂದಪೂರ್, ಕಸಬಾ ಗೌಡ್ರು. ಲಿಂಗಾರಾಜ್ ಪಾಟೀಲ್, ಗೌಡ್ರು ಪುಟ್ಟಪ್ಪ, ದೇವಸ್ಥಾನ ಸಮಿತಿ ಅಧ್ಯಕ್ಷ ಪೂಜಾರ್ ಈರಣ್ಣ, ಪ್ರಧಾನ ಕಾರ್ಯದರ್ಶಿ ಕೆ.ಬಿ. ರಾಜಶೇಖರ, ಖಜಾಂಚಿ ಸುರೇಶ್ ಚಂದಪೂರ್, ಉಪಾಧ್ಯಕ್ಷ ಬೆಣ್ಣೆ ರೇವಣಸಿದ್ದಪ್ಪ, ನಿರ್ದೇಶಕರಾದ ಎಂ.ಚಿದಾನಂದ ಕಂಚಿಕೇರಿ, ನೀಲಗುಂದ ಪರಮೇಶ್ವರಪ್ಪ, ದಾವಣಗೆರೆ ರುದ್ರೇಶ್, ಹಣಿಗಿ ಸುರೇಶಪ್ಪ, ಹಾವನೂರು ಈರಣ್ಣ, ರಾಘು ಚೌಗಲೆ, ಮಜ್ಜಿಗಿ ಚಂದ್ರಪ್ಪ, ಕರಿಬಸಪ್ಪ ಕಂಚಿಕೇರಿ, ಬೆಣ್ಣೆ ಸಿದ್ದೇಶ್, ವೇದಮೂರ್ತಿ, ಗುಡ್ಡದ್ ಮಹಾಂತೇಶ್, ಅರ್ಚಕರು ಈರಣ್ಣ, ನಾಗರಾಜ್, ನಂಜುಡಪ್ಪ, ಕಣದಾಳ ಶೇಖರಪ್ಪ, ಕಸಬಾ ಬಣಕಾರ ಮಹಾಂತೇಶ್, ಮಾಜೇನಹಳ್ಳಿ ಬಣಕಾರ ಆಂಜನೇಯ, ದುರಗಪ್ಪ, ಆನಂದ ಕಣದಾಳ, ಹರಪನಹಳ್ಳಿ ಬಸವರಾಜಪ್ಪ, ಗುರುಪ್ರಸಾದ್ ಕಂಚಿಕೇರಿ, ಪ್ರಕಾಶ್ ಕಂಚಿಕೇರಿ ಸಿಂಗಾಡಿ ಸಿದ್ದಪ್ಪ ಮತ್ತಿತರರಿದ್ದರು.

error: Content is protected !!