ದಾವಣಗೆರೆ, ಆ.1- ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಶ್ರೀಮತಿ ಎಸ್.ಆರ್. ಶಾರದ ಅವರು ನಿನ್ನೆ ನಿವೃತ್ತಿ ಹೊಂದಿದ್ದು, ಇವರಿಗೆ ಸರ್ಕಾರಿ ನೌಕರರ ಸಂಘದ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಎಸ್. ಹಾಲೇಶಪ್ಪ , ಸಿಡಿಪಿಓ ಅಭಿಕುಮಾರ್ ಹಾಗೂ ಸಿ. ರಾಘವೇಂದ್ರ ಅವರುಗಳು ಸನ್ಮಾನಿಸಿ ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ಟಿ. ಸುರೇಶ್, ದಯಾನಂದ, ಕೊಟ್ರೇಶ್, ಮಲ್ಲಿಕಾರ್ಜುನ, ಶ್ರೀಮತಿಯರಾದ ಸವಿತಾ ಸಣ್ಣಮನೆ, ಪ್ರಮೀಳ, ಹೆಚ್. ಕವಿತಾ, ಶಿವಲೀಲಾ, ಸುಮಂಗಳ , ಕವಿತಾ ಆನ್ವೇರಿ, ಶೋಭ ಪಾಟೀಲ್, ರತ್ನಮ್ಮ ರಂಗಣ್ಣನವರ್, ಜ್ಯೋತಿ ಪಾಟಿಲ್, ಜ್ಯೋತಿ ರೆಡ್ಡಿ, ಶೋಭ ಮಲ್ಲಿಕಾರ್ಜುನ್, ಕುಮಾರ್, ಪ್ರದೀಪ, ಮನೋಜ್ ಮತ್ತಿತರರು ಹಾಜರಿದ್ದರು.