ಕ್ಯಾಂಡಲ್ ತಯಾರಿಕಾ ಘಟಕಕ್ಕೆ ಬೆಂಕಿ: ಮೂವರಿಗೆ ಗಂಭೀರ ಗಾಯ

ಕ್ಯಾಂಡಲ್ ತಯಾರಿಕಾ ಘಟಕಕ್ಕೆ ಬೆಂಕಿ: ಮೂವರಿಗೆ ಗಂಭೀರ ಗಾಯ

ರಾಣೇಬೆನ್ನೂರು, ಆ.1- ಸ್ಪಾರ್ಕ್ ಕ್ಯಾಂಡಲ್ ತಯಾರಿಕಾ ಘಟಕಕ್ಕೆ (ಕಾರ್ಖಾನೆಗೆ) ಬೆಂಕಿ ತಗುಲಿ 7 ಜನರು ಗಾಯಗೊಂಡ ಘಟನೆ ಮಂಗಳವಾರ ಇಲ್ಲಿನ ಮಾರುತಿ ನಗರದಲ್ಲಿ ಸಂಭವಿಸಿದೆ. 

ಶ್ರೀಕಾಂತ ಮಾಲೀಕತ್ವದ ಸ್ಪಾರ್ಕ್ ಕ್ಯಾಂಡಲ್ ತಯಾರಿಕೆ (ಜನ್ಮ ದಿನಾಚರಣೆಯಲ್ಲಿ ಬಳಸಲಾಗುವ) ಘಟಕದಲ್ಲಿ ಘಟಕದಲ್ಲಿ ಮಧ್ಯಾಹ್ನ ಸುಮಾರು 2.15ರ ಹೊತ್ತಿಗೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದೆ. 

ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಆ ಪೈಕಿ 3 ಜನರ ಸ್ಥಿತಿ ಗಂಭೀರವಾಗಿದೆ.  ಜಿಲ್ಲಾಧಿಕಾರಿ ರಘುನಂದನಮೂರ್ತಿ, ಎಸ್‍ಪಿ ಡಾ.ಶಿವಕುಮಾರ ಗುಣಾರೆ, ಶಹರ ಸಿಪಿಐ ಗೌಡಪ್ಪಗೌಡರ, ನಗರಸಭೆ ಪೌರಾಯುಕ್ತ  ನಿಂಗಪ್ಪ ಕುಮ್ಮಣ್ಣನವರ, ಪರಿಸರ ಎಂಜಿನಿಯರ್ ಮಂಜುಳಾದೇವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

error: Content is protected !!