ಹರಿಹರ, ಜು. 30 – ನಗರದ ಹೊರವಲಯದ ದೀಟೂರು ಗ್ರಾಮದಲ್ಲಿ ಇತ್ತೀಚೆಗೆ ಧಾರಾಕಾರ ಸುರಿದ ಮಳೆಯಿಂದಾಗಿ ದಾವಣಗೆರೆ ಶಾಂತವೀರಪ್ಪ, ಗುಡ್ಡೇರ ನಾಗರಾಜಪ್ಪ, ಗುಡ್ಡೇರ ಬಸವರಾಜಪ್ಪ ಇವರ ಮನೆಯ ಗೋಡೆ ಕುಸಿದು ಬಿದ್ದಿತ್ತು. ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಸ್ಥಳಕ್ಕೆ ಭೇಟಿ ಕೊಟ್ಟು ಸಾಂತ್ವನ ಹೇಳಿ ನೆರವು ನೀಡಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮದ ಮುಖಂಡ ನಿರಂಜನ ಹಾಗೂ ಇತರರು ಹಾಜರಿದ್ದರು.
ಹರಿಹರ : ಮಳೆ ಸಂತ್ರಸ್ತರಿಗೆ ಚಂದ್ರಶೇಖರ್ ಪೂಜಾರ್ ನೆರವು
![06 chandrashekhar purjar 31.07.2023 ಹರಿಹರ : ಮಳೆ ಸಂತ್ರಸ್ತರಿಗೆ ಚಂದ್ರಶೇಖರ್ ಪೂಜಾರ್ ನೆರವು](https://janathavani.com/wp-content/uploads/2023/07/06-chandrashekhar-purjar-31.07.2023.jpg)