ಮಾಗಿ ಕುಟುಂಬದಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅಕ್ಕಿ ಸಮರ್ಪಣೆ

ಮಾಗಿ ಕುಟುಂಬದಿಂದ  ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅಕ್ಕಿ ಸಮರ್ಪಣೆ

ದಾವಣಗೆರೆ, ಜು.30- ದಿ. ಶ್ರೀಮತಿ ಬಸಮ್ಮ ಮತ್ತು ವೀರಬಸಪ್ಪ ಮಾಗಿ ಕುಟುಂಬದ ವತಿಯಿಂದ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಗೆ ತೃತೀಯ ವರ್ಷದ ಒಂದು ಲೋಡ್ ಅಕ್ಕಿಯನ್ನು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಕಾರ್ಯದರ್ಶಿ ಜಯಪ್ರಕಾಶ್ ಮಾಗಿ, ಕೈಲಾಸ ಬಾಬು ಮಾಗಿ ಅವರು ನಗರದ ಹಳೇಪೇಟೆ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಧರ್ಮಸ್ಥಳಕ್ಕೆ ಭಕ್ತಿ ಸಮರ್ಪಿಸಲು ತೆರಳಿದರು. 

ಲಾರಿಗೆ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಅಧ್ಯಕ್ಷ  ದೇವರಮನಿ ಶಿವಕುಮಾರ್ ಅವರು ಚಾಲನೆ ನೀಡಿದರು. 

ಪಾಲಿಕೆ ಮಾಜಿ ಸದಸ್ಯರಾದ ಶಿವನಗೌಡ, ಟಿ. ಪಾಟೀಲ, ಬಿ.ಪಿ.ಎಂ ಜಗದೀಶ್, ಬಿ.ಪಿ.ಎಂ. ಮಂಜು ನಾಥ್, ವಿನಾಯಕ ಬ್ಯಾಡಗಿ, ಜಯರಾಜ್ ಮೇಟಿ, ಪ್ರಕಾಶ್ ಮೇಟಿ, ಎಂ.ವೈ. ಆನಂದ, ಸಂಗಮೇಶ ಗದಗ, ಅಶೋಕ ಇಂಜಿನಿಯರ್, ಆರ್.ಎಂ. ಪಂಚಾ ಕ್ಷರಿ, ಪರಶುರಾಮ್ ಪಿ.ಎಸ್, ಮಾಳಗಿ ಸಿದ್ದೇಶ್, ಸತೀಶ್ ಹುಬ್ಬಳ್ಳಿ, ಸತೀಶ್ ಹುರ್ಣೇಕರ್, ಟಿ.ಎಸ್‌.ಎಂ. ಮಲ್ಲಿಕಾರ್ಜುನ, ನಿಖಿಲ್ ಮಾಗಿ, ಹರ್ಷ ಮಾಗಿ, ಬಸವಲಿಂಗ, ಅಣಬೇರು ಮಂಜುನಾಥ, ಸಿ.ಎಂ.ಬಿ ಶಿವಕುಮಾರ್, ಅಣ್ಣಪ್ಪ ಸ್ವಾಮಿ, ಮಂಜುನಾಥ್ ಸ್ವಾಮಿ, ಚಿತ್ರಗಿ ಸಂಗಪ್ಪ, ಕೆ.ಸಿ. ಲಿಂಗರಾಜ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!