ಸ್ಕೌಟ್ ಮತ್ತು ಗೈಡ್ಸ್‌ನಿಂದ ಕಾರ್ಗಿಲ್‌ ದಿವಸ್‌

ಸ್ಕೌಟ್  ಮತ್ತು  ಗೈಡ್ಸ್‌ನಿಂದ ಕಾರ್ಗಿಲ್‌ ದಿವಸ್‌

ದಾವಣಗೆರೆ, ಜು. 30 – ಭಾರತ್ ಸ್ಕೌಟ್ ಅಂಡ್ ಗೈಡ್ಸ್‌ ವತಿಯಿಂದ ಕಾರ್ಗಿಲ್ ವಿಜಯ ದಿವಸವನ್ನು ನಗರದ ಅಮರ್ ಜವಾನ್ ಮೆಮೋರಿಯಲ್ ಪಾರ್ಕ್ ನಲ್ಲಿ ಹೆಮ್ಮೆಯಿಂದ ಆಚರಿಸಲಾಯಿತು. 

ವಿಶೇಷ ಅತಿಥಿಗಳಾಗಿ ನಿವೃತ್ತ ಏರ್ ಫೋರ್ಸ್ ಅಧಿಕಾರಿ ಎಂ. ಎಸ್. ರಾಮಚಂದ್ರಪ್ಪ ಆಗಮಿಸಿ, ಸ್ಕೌಟ್ ಅಂಡ್ ಗೈಡ್ ಮಕ್ಕಳಿಗೆ ಕಾರ್ಗಿಲ್ ದಿವಸದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೈಜವಾಗಿ ವಿವರಿಸಿದರು. 

ನಂದಗೋಕುಲ ಶಾಲೆಯ ಅಧ್ಯಕ್ಷ ವೈ.ಬಿ. ಸತೀಶ್ ನೇತೃತ್ವದಲ್ಲಿ ಹಾಗೂ ಶಾಲೆಯ ಕಾರ್ಯದರ್ಶಿ ಶ್ರೀಮತಿ ಬಿ. ಅನುಸೂಯ ಮತ್ತು ಮುಖ್ಯ ಶಿಕ್ಷಕರಾದ ರೆಹಾನಾ ಬಾನು ನಾಸಿಕ ಮತ್ತು ಭಾರತ್ ಸ್ಕೌಟ್ ಅಂಡ್ ಗೈಡ್‌ನ ಜಿಲ್ಲಾ ಸಂಘಟಕರಾದ ಶ್ರೀಮತಿ ಅಶ್ವಿನಿ ಮತ್ತು ಜಂಟಿ ಕಾರ್ಯದರ್ಶಿ ಶ್ರೀಮತಿ ಸುಖವಾನಿ ಹಾಗೂ ಯುವ ಸಮಿತಿಯ ಅಧ್ಯಕ್ಷ ಮುಸ್ತಫರಜಾ ಮತ್ತು ಸದಸ್ಯರಾದ ದೀಪಕ್ ಹಾಗೂ ನವೀನ್ ಹಾಗೂ ಸ್ಕೌಟ್ ಮಾಸ್ಟರ್, ಗೈಡ್ ಕ್ಯಾಪ್ಟನ್ಸ್ ಮತ್ತು ನಂದಗೋಕುಲ ಶಾಲೆಯ ಎಲ್ಲಾ ಶಿಕ್ಷಕ ವೃಂದದವರು  ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸ್ಕೌಟ್, ಗೈಡ್, ಕಬ್ಸ್‌, ಬುಲ್ ಬುಲ್ ವಿದ್ಯಾರ್ಥಿಗಳಿಂದ ಈ ಕಾರ್ಯಕ್ರಮದ ರಂಗು ಹೆಚ್ಚಾಯಿತು.

error: Content is protected !!