ಮಲೇಬೆನ್ನೂರು, ಜು.28- ಪಟ್ಟಣದ 18ನೇ ವಾರ್ಡ್ನಲ್ಲಿ ಮಳೆಯಿಂದ ಶಿಥಿಲಗೊಂಡಿರುವ ಮನೆಯಲ್ಲಿ ವಾಸವಾಗಿದ್ದ ವೃದ್ಧೆಯೊಬ್ಬರನ್ನು ಭೇಟಿ ಮಾಡಿದ ಉಪತಹಶೀಲ್ದಾರ್ ಆರ್.ರವಿ, ಪುರಸಭೆ ಮುಖ್ಯಾಧಿಕಾರಿ ಎ.ಸುರೇಶ್, ವಾರ್ಡ್ ಸದಸ್ಯ ಬಿ.ಮಂಜುನಾಥ್ ಅವರು, ಅವರ ಮನವೊಲಿಸಿ, ಬೇರೆ ಮನೆಗೆ ಕಳುಹಿಸಿದ್ದಾರೆ. ಪಟ್ಟಣದಲ್ಲಿ ಇದೇ ರೀತಿ ಶಿಥಿಲಗೊಂಡಿರುವ ಮನೆಗಳಲ್ಲಿ ವಾಸಿಸುತ್ತಿರುವವರು ಬೇರೆ ಕಡೆಗೆ ಸ್ಥಳಾಂತರವಾಗುವಂತೆ ಪುರಸಭೆ ಮುಖ್ಯಾಧಿಕಾರಿ ಸುರೇಶ್ ಮನವಿ ಮಾಡಿದ್ದಾರೆ. ಗ್ರಾಮ ಲೆಕ್ಕಾಧಿಕಾರಿ ಅಣ್ಣಪ್ಪ, ಗ್ರಾಮ ಸಹಾಯಕ ಮಾರುತಿ ಈ ವೇಳೆ ಹಾಜರಿದ್ದರು.
ಶಿಥಿಲಗೊಂಡ ಮನೆಯಲ್ಲಿದ್ದ ವೃದ್ಧೆಗೆ ಬೇರೆ ಮನೆಯಲ್ಲಿ ಆಶ್ರಯ
![06 mbr 18news 29.07.2023 ಶಿಥಿಲಗೊಂಡ ಮನೆಯಲ್ಲಿದ್ದ ವೃದ್ಧೆಗೆ ಬೇರೆ ಮನೆಯಲ್ಲಿ ಆಶ್ರಯ](https://janathavani.com/wp-content/uploads/2023/07/06-mbr-18news-29.07.2023.jpg)