ಎ.ಆರ್.ಉಜ್ಜನಪ್ಪ ಸ್ನೇಹಿಜೀವಿ : ಡಾ.ನಾಗಪ್ರಕಾಶ್‌

ಎ.ಆರ್.ಉಜ್ಜನಪ್ಪ ಸ್ನೇಹಿಜೀವಿ : ಡಾ.ನಾಗಪ್ರಕಾಶ್‌

ದಾವಣಗೆರೆ, ಜು.25- ಲಯನ್ಸ್ ಕ್ಲಬ್‌ನ ಮಾಜಿ ಜಿಲ್ಲಾ ಗೌರ್ನರ್   ಎ.ಆರ್. ಉಜ್ಜನಪ್ಪ  ಅವರ ನಿಧನಕ್ಕೆ ನಗರದ ಲಯನ್ಸ್ ಕ್ಲಬ್ ವತಿಯಿಂದ ಲಯನ್ಸ್ ಭವನದಲ್ಲಿ ಸಂತಾಪ ಸೂಚಿಸಲಾಯಿತು.

ಲಯನ್ಸ್ ಮಾಜಿ ಜಿಲ್ಲಾ ರಾಜ್ಯಪಾಲ ಬಿ.ಎಸ್.ನಾಗಪ್ರಕಾಶ್    ಮಾತನಾಡಿ,  ಉಜ್ಜನಪ್ಪ  ಸ್ನೇಹ ಜೀವಿ,  ನಾವುಗಳೆಲ್ಲರೂ ಬೇರೆ ಬೇರೆ ಕ್ಲಬ್‌ಗಳಲ್ಲಿ ಸದಸ್ಯರಾಗಿದ್ದರೂ ಸಹ ಒಂದೇ ಸಂಸ್ಥೆಯ ಸದಸ್ಯರೆಂಬ ಭಾವನೆ ಇತ್ತು. ಹೀಗೆ ನಮ್ಮ ಅವರ ಸ್ನೇಹವಿದ್ದರೂ ಕೂಡ ಚುನಾವಣೆ ಸಂದರ್ಭದಲ್ಲಿ ಮಾತ್ರ ಪರ-ವಿರೋಧ ಇರುತ್ತಿತ್ತು. ನಂತರ ಅವರೇ ನಮ್ಮನ್ನು ಹುಡುಕಿಕೊಂಡು ಬಂದು ಸ್ನೇಹದಿಂದ ಮಾತನಾಡಿಸುತ್ತಿದ್ದರು ಎಂದು ಸ್ಮರಿಸಿದರು.

ಲಯನ್ಸ್ ಕ್ಲಬ್ ಅಲ್ಲದೆ  ಜಿಲ್ಲಾ ಪರಿಷತ್ತಿನ  ಅಧ್ಯಕ್ಷರಾಗಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಹಾಗೂ ಹಾಲಿ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾಗಿ ಹತ್ತು ಹಲವಾರು ಸಂಘ, ಸಂಸ್ಥೆಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದರು ಎಂದು ತಿಳಿಸಿದರು.

ಲಯನ್ಸ್ ಕ್ಲಬ್ ಅಧ್ಯಕ್ಷ ನೀಲಿ ಉಮೇಶ್ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಭೀಮಾನಂದ ಶೆಟ್ಟಿ, ಖಜಾಂಚಿ ಮಹಾಲಿಂಗೇಶ್‌, ಲಯನ್ಸ್‌ ಪ್ರಾಂತೀಯ ಅಧ್ಯಕ್ಷ ಎಸ್.ಓಂಕಾರಪ್ಪ, ಉಪಾಧ್ಯಕ್ಷ ಎಸ್.ಜಿ.ಉಳುವಯ್ಯ, ಶ್ರೀ ಕನ್ನಿಕಾ ಪರಮೇಶ್ವರಿ ಕೋ-ಆಪ್.  ಬ್ಯಾಂಕಿನ ಅಧ್ಯಕ್ಷ  ಆರ್.ಜಿ.ಶ್ರೀನಿವಾಸ ಮೂರ್ತಿ,  ಲಯನ್ಸ್ ಹಿರಿಯ ಸದಸ್ಯರುಗಳಾದ ಎ.ಎನ್.ಮದನ್‌ಕುಮಾರ್, ಎಸ್.ಕೆ.ಶಿವಕುಮಾರ್, ಟಿ.ಎಂ.ಪಂಚಾಕ್ಷರಯ್ಯ, ದಿನೇಶ್‌ ಕೆ.ಶೆಟ್ಟಿ, ಹೆಚ್.ವಿ.ಮಂಜುನಾಥ ಸ್ವಾಮಿ, ರವಿಶಂಕರ್ ವಾಲಿ, ಬೆಳ್ಳೂಡಿ ಶಿವಕುಮಾರ್, ಇ. ಅಜಯ್ ನಾರಾಯಣ, ಆರ್. ಸಂತೋಷ್, ಎನ್.ವಿ. ಬಂಡಿವಾಡ, ಬಾದಾಮಿ ಜಯಣ್ಣ ಹಾಗೂ ಇತರರು ಮಾತನಾಡಿದರು.

error: Content is protected !!