ಹರಪನಹಳ್ಳಿ ಪ್ರಾ. ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಂಜಿನಪ್ಪ ನಿರ್ದೇಶಕ

ಹರಪನಹಳ್ಳಿ ಪ್ರಾ. ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಂಜಿನಪ್ಪ ನಿರ್ದೇಶಕ

ಹರಪನಹಳ್ಳಿ, ಜು. 25- ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ನಿರ್ದೇಶಕರಾಗಿ ಪುರಸಭೆ ಸದಸ್ಯ ಎಂ.ವಿ. ಅಂಜಿನಪ್ಪ ಮಂಗಳವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅನಾರೋಗ್ಯದ ನಿಮಿತ್ತ ಪೂಜಾರ್ ಮಂಜುನಾಥ್ ಅವರು ತಮ್ಮ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯ ಸಭೆಯಲ್ಲಿ ಸರ್ವ ಸದಸ್ಯರ ಸಮ್ಮುಖದಲ್ಲಿ ಖಾಲಿ ಇರುವ ನಿರ್ದೇಶಕರ ಸ್ಥಾನಕ್ಕೆ ಎಂ.ವಿ. ಅಂಜಿನಪ್ಪ ಅವರನ್ನು ಸರ್ವಾನುಮತದಿಂದ ನೇರವಾಗಿ ಆಯ್ಕೆ ಮಾಡಲಾಯಿತು ಎಂದು ಸಂಘದ ಅಧ್ಯಕ್ಷ ಟಿ.ಹೆಚ್.ಎಂ. ಮಂಜುನಾಥ ತಿಳಿಸಿದರು.

ಈ ಸಂದರ್ಭದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 12 ಚುನಾಯಿತ ನಿರ್ದೇಶಕರು, ಒಬ್ಬರು ಸರ್ಕಾರದ ನಾಮ ನಿರ್ದೇಶಕರು, ಒಟ್ಟು 13 ಸದಸ್ಯರು ಹಾಜರಿದ್ದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ, ಗಣಚಾರಿ ದುರುಗಪ್ಪ, ಹೆಚ್. ಚಮನ್‌ವಲಿ, ಪೂಜಾರ ದಕ್ಷಿಣ ಮೂರ್ತಿ, ಚಿಕ್ಕೇರಿ ವೆಂಕಟೇಶ್, ಗಿಡ್ಡಹಳ್ಳಿ ನಾಗರಾಜ, ಎಂ.ವಿ. ಕೃಷ್ಣ ಕಾಂತ, ಗುಂಡಿ ಸಾಜತ್, ಎಂ. ಸುಮಂಗಳಾ, ಕೆ. ಮಹಬೂಬ್ ಬಾಷಾ, ದಂಡಿನ ಹರೀಶ್, ಪ್ರಕಾಶ್ ಹೆಬ್ಬಾರ್, ಕಾರ್ಯದರ್ಶಿ ಡಿ. ಬಸವರಾಜ್, ಪುರಸಭೆ ಸದಸ್ಯರಾದ ಗೊಂಗಡಿ ನಾಗರಾಜ, ಟಿ. ವೆಂಕಟೇಶ್, ಲಾಟಿ ದಾದಾಪೀರ, ಉದ್ದಾರ ಗಣೇಶ್, ಹೆಚ್. ವಸಂತಪ್ಪ, ಬಾಣದ ಅಂಜಿನಪ್ಪ, ಹುಲಿಕಟ್ಟೆ ಚಂದ್ರಪ್ಪ, ಚಿಕ್ಕೇರಿ ಬಸಪ್ಪ, ಎಲ್.ಎಂ. ನಾಯ್ಕ, ಹನುಮಂತ ಅಲಮರಸಿಕೇರಿ, ಗುಡಿ ನಾಗರಾಜ್ ಮತ್ತಿತರರಿದ್ದರು.

error: Content is protected !!