ಡಿಆರ್‌ಆರ್‌ ವಿದ್ಯಾಸಂಸ್ಥೆಯಲ್ಲಿ ಗುರು ವಂದನೆ

ಡಿಆರ್‌ಆರ್‌ ವಿದ್ಯಾಸಂಸ್ಥೆಯಲ್ಲಿ ಗುರು ವಂದನೆ

ದಾವಣಗೆರೆ, ಜು. 24 – ಜಿಟಿ ಜಿಟಿ ಮಳೆಯಲ್ಲೂ ಅಲ್ಲಿ ಉತ್ಸಾಹ ಮತ್ತು ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ವಿದ್ಯಾರ್ಥಿ ವೃಂದದ ಪ್ರೀತಿ, ಅಭಿಮಾನ ನೆಚ್ಚಿನ ಶಿಕ್ಷಕರನ್ನು ಅಲ್ಲಿಗೆ ಹೊತ್ತು ತಂದಿತ್ತು. 

ನಗರದ ಡಿ.ಆರ್.ಆರ್. ವಿದ್ಯಾ ಸಂಸ್ಥೆಯ ಸಭಾಂಗಣ ಆ ಹಳೆಯ ವಿದ್ಯಾರ್ಥಿಗಳ ಪ್ರೀತ್ಯಾಭಿಮಾನದಿಂದ ಕಳೆಗಟ್ಟಿತ್ತು. 

ಸಂಸ್ಥೆಯ 2008 – 09 ನೇ ಸಾಲಿನ ಹೈಸ್ಕೂಲ್ ವಿದ್ಯಾರ್ಥಿಗಳು ತಮ್ಮ ಪ್ರೀತಿಯ ವಿದ್ಯಾ ಗುರುಗಳನ್ನು ಪ್ರೀತ್ಯಾದರದಿಂದ ಆಹ್ವಾನಿಸಿ, ಕಲಿಸಿ ಕೊಟ್ಟ ವಿದ್ಯೆ ಸ್ಮರಿಸಿ, ಗುರು ವಂದನೆ ಸಲ್ಲಿಸಿದರು. ಗುರುಗಳ ಪಾಠ,  ಆಟೋಟಗಳ ಮೆಲುಕು ಹಾಕಿ, ಪಾಠದ ಜೊತೆ ಗುರುಗಳು ಕಲಿಸಿದ ಜೀವನ ಪಾಠ, ಸಂಸ್ಕೃತಿ, ಸಂಸ್ಕಾರ , ಮೌಲ್ಯ, ಪ್ರತಿಭೆಗೆ ನೀಡಿದ ಮನ್ನಣೆ, ಪ್ರೇರಣೆ ಇತ್ಯಾದಿ ನೆನೆದು ಗದ್ಗದಿತರಾದರು. ತಮ್ಮ ನೆಚ್ಚಿನ ಗುರುಗಳನ್ನು ಸನ್ಮಾನಿಸಿ , ಗುರು ಕಾಣಿಕೆ ನೀಡಿ ಸಂಭ್ರಮಿಸಿದರು. 

ಈ ವೇಳೆ ಗುರು ವೃಂದದ ಪರವಾಗಿ ಹಾಲೇಶ್ ಹಂಚಿನಮನೆ ನಲ್ಕುದುರೆ , ತಿಪ್ಪೇಸ್ವಾಮಿ, ಗಂಗಾಧರ ಬಿ.ಎಲ್. ನಿಟ್ಟೂರ್, ಮಂಜುನಾಥ್, ನಾಗರಾಜಪ್ಪ, ಹೇಮಾವತಿ ಸಾವಳಗಿ, ಸುರೇಶ್ ಪಿ. ಮುರುಗಿ ಮಾತನಾಡಿ, ವಿದ್ಯಾರ್ಥಿಗಳ ಗುರು ಸ್ಮರಣೆಯ ಈ ಸಂಸ್ಕೃತಿ ಮಾದರಿ ಎಂದು ಶ್ಲ್ಯಾಘಿಸಿ, ಪ್ರತಿಯಾಗಿ ವಂದಿಸಿ, ಶುಭ ಹಾರೈಸಿದರು . 

ಶಿಕ್ಷಕರಾದ ಭೋಜರಾಜ್ ಯಾದವ್ , ಟಿ. ಮಹೇಶನ್ , ಶಿಕ್ಷಕಿಯರಾದ 

ಶ್ರೀಮತಿ ಸರಸ್ವತಿ, ಶ್ರೀಮತಿ ಮಹಾಲಕ್ಷ್ಮ, ಶ್ರೀಮತಿ ಸುಚಿತ್ರಾ ಸೇರಿದಂತೆ ಇತರರು ವೇದಿಕೆಯಲ್ಲಿದ್ದರು.

ಅನಿತಾ, ಆಶಾ, ಸೌಮ್ಯ, ಗೀತ, ಶೃತಿ, ಶ್ರೀಧರ್, ಗಿರೀಶ್ ಭಟ್, ಮಣಿಕಂಠ, ಕಿರಣ್ ಸೇರಿದಂತೆ, ಇತರರು ಪಾಲ್ಗೊಂಡಿದ್ದರು. 

error: Content is protected !!