ದಾವಣಗೆರೆ, ಜು. 17 – ನಗರದ ರಾಮ್ ಅಂಡ್ ಕೋ ಸರ್ಕಲ್ ಬಳಿ ಅರಮನೆ ಸ್ವೀಟ್ಸ್ ಅಂಗಡಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪ್ರಭಾ ಮಲ್ಲಿಕಾರ್ಜುನ್, ಲಿಂಗಾರೆಡ್ಡಿ, ಶ್ರೀಮತಿ ಸುಜಾತ, ಅಮೋಘ, ಬಾಲಕೃಷ್ಣ, ಶ್ರೀಮತಿ ಲಿಖಿತ, ಶ್ರೀಮತಿ ಶ್ರೇಯ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು. ಅರಮನೆ ಸ್ವೀಟ್ಸ್ ಶೋ ರೂಂ ನಲ್ಲಿ ಅತ್ಯಾಕರ್ಷಕ ಸಿಹಿ ತಿನಿಸುಗಳು, ಬೆಂಗಾಲಿ ಸಿಹಿ ತಿನಿಸುಗಳು, ಆಂಧ್ರಪ್ರದೇಶದ ವಿವಿಧ ಸಿಹಿ ತಿನಿಸುಗಳು ದೊರೆಯುತ್ತವೆ ಎಂದು ಮಾಲೀಕರಾದ ಬಾಲಕೃಷ್ಣ ಹಾಗೂ ಅಮೋಘ ತಿಳಿಸಿದರು.