ವಿತರಣೆ ಇಲ್ಲದ ಸಂಗ್ರಹಣೆಗೆ ಅರ್ಥವಿಲ್ಲ

ವಿತರಣೆ ಇಲ್ಲದ ಸಂಗ್ರಹಣೆಗೆ ಅರ್ಥವಿಲ್ಲ

ದಾವಣಗೆರೆ, ಜು. 17- ಸಂಗ್ರಹಣೆಯೇ ಬದುಕಿನ ಸಾರ್ಥಕ್ಯವಲ್ಲ, ಸಂಗ್ರಹಿಸಿದ್ದರಲ್ಲಿ ಸಾಕಷ್ಟನ್ನು ಸಮಾಜಕ್ಕೆ ವಿತರಿಸಲೇಬೇಕು. ಇದನ್ನೇ `ದಾನ’ವೆನ್ನುತ್ತಾರೆ, ದಾನದಲ್ಲಿ ದ್ರವ್ಯ ದಾನವು ಶ್ರೇಷ್ಠವಾದರೆ ಜ್ಞಾನ ದಾನವು ಪರಮ ಶ್ರೇಷ್ಠ ಎಂದು ಹಿರಿಯ ಪತ್ರಕರ್ತ ಹೆಚ್.ಬಿ. ಮಂಜುನಾಥ್ ಹೇಳಿದರು. 

 ನಿಟುವಳ್ಳಿಯ ಶ್ರೀ ಶಿವ ಚಿದಂಬರ ಅಖಂಡ ವೀಣಾ  ಸಪ್ತಾಹದ ಅಂಗವಾಗಿ `ದಾನ’ ಎಂಬ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

ದಾನವು ಪ್ರತಿಫಲಾಪೇಕ್ಷೆ ಇಲ್ಲದ,  ಅಹಂಕಾರ, ಅಹಂಭಾವವಿಲ್ಲದ ಕ್ರಿಯೆಯಾಗಿ ಸತ್ಪಾತ್ರರಿಗೆ ಸಲ್ಲಬೇಕು. ದಾನ ಮಾಡ ಬೇಕೆಂದರೆ ಸಂಪತ್ತು, ಶ್ರೀಮಂತಿಕೆ ಇರಲೇ ಬೇಕೆಂದಿಲ್ಲ. ಬುದ್ಧಿ, ಶ್ರೀಮಂತಿಕೆ ಇರುವವರು ಜ್ಞಾನ ದಾನವನ್ನೂ, ಆರೋಗ್ಯವಂತರು ರಕ್ತ ದಾನವನ್ನೂ ಮಾಡಬಹುದು. ಇದಕ್ಕೂ ಮಿಗಿಲಾಗಿ ನೇತ್ರದಾನ, ಅಂಗಾಂಗಗಳ ದಾನ, ಕೊನೆಯಲ್ಲಿ ದೇಹ ದಾನವನ್ನೂ  ಸಹಾ ಮಾಡಿ ಸಮಾಜಕ್ಕೆ ಉಪಕಾರಿಗಳಾಗಬಹುದು  ಎಂಬುದನ್ನು  ಸ್ವಾರಸ್ಯಕರ ಕಥೆಗಳ ಮುಖಾಂತರ ವಿವರಿಸಿದರು.

ಶ್ರೀ ಶಿವ ಚಿದಂಬರ ಕ್ಷೇತ್ರದ ಗೌರವಾಧ್ಯಕ್ಷ ವಿ. ಮೋಹನ್ ದೀಕ್ಷಿತ್ ಹಾಗೂ ಭಕ್ತ ಮಂಡಳಿಯವರು ಉಪಸ್ಥಿತರಿದ್ದರು.

error: Content is protected !!