ಹರಿಹರ, ಜು. 13- ಹಿರೇಕೋಡಿಯಲ್ಲಿ ನಡೆದ ಶ್ರೀ ಕಾಮ ಕುಮಾರ ನಂದಿ ಜೈನ ಮುನಿಗಳ ಹತ್ಯೆಯನ್ನು ಖಂಡಿಸಿ, ನಗರದ ಜೈನ್ ಸಮಾಜದವರು ಪ್ರತಿಭಟನೆ ನಡೆಸಿ, ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಮಾಜದ ಮುಖಂಡರು ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಮತ್ತು ವಿಹಾರ ಮಾಡುವಂತಹ ಜೈನ ಮುನಿಗಳಿಗೆ ಸೂಕ್ತ ರೀತಿಯಲ್ಲಿ ರಕ್ಷಣೆ ಒದಗಿಸಿ, ಜೈನ ಧರ್ಮವನ್ನು ಉಳಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು. ಜೈನ ಸಮಾಜದ ಅಧ್ಯಕ್ಷ ಜಿ.ಬಿ. ಜಿನಚಂದ್ರ, ಬಾಲಕೃಷ್ಣ ಮಹಿಷ್ಕರ್ ಠಿಕಾರೆ, ಬಿ.ಎಸ್. ಮಹಾವೀರ, ಕೆ.ಪಿ.ಗುಣಪಾಲ, ಸತೀಶ್ ಕುಮಾರ್, ಮಹಾವೀರ ಬೆಸ್ಕಾಂ, ಜಕ್ಕಣ್ಣನವರ್, ಅಜಿತ್ಕುಮಾರ್ ಬೋಗಿ, ಜಿ.ಎಸ್. ಶ್ವೇತಾ, ಪ್ರಭಾ, ಶೋಭಾ, ಪುಷ್ಪಾ ಇತರರು ಹಾಜರಿದ್ದರು.